ಶಿವರಾತ್ರಿಗೆ ಬರ್ತಾನೆ ಶಿವ

ಶಿವರಾತ್ರಿಗೆ ಬರ್ತಾನೆ ಶಿವ

ಬೆಂಗಳೂರು, ಫೆ. 14 : ಶಿವರಾತ್ರಿ ಬಂದೇ ಬಿಡ್ತು. ಗುಡಿ-ಗುಂಡಾರಗಳಲ್ಲಿ ಶಿವನ ಜಪತಪ ಶುರುವಾಗಲಿದೆ. ರಘು ವಿಜಯ ಕಸ್ತೂರಿ ನಿರ್ದೇಶನದ ‘ಶಿವ’ ಸಿನಿಮಾ ಬಿಡುಗಡೆ ಆಗಲಿದೆ. ಇಲ್ಲಿ ನಿರ್ದೇಶನದ ಜತೆಗೆ ನಾಯಕ, ನಿರ್ವಪಕನಾಗಿ ಎಲ್ಲ ಜವಾಬ್ದಾರಿಯನ್ನೂ ರಘು ಅವರೇ ವಹಿಸಿಕೊಂಡಿದ್ದಾರೆ. ಕೃಷಿ ಕುಟುಂಬದಿಂದ ಬಂದಿರುವ ರಘುಗೆ ಹಲವು ಸಿನಿಮಾಗಳಲ್ಲಿ ನಟಿಸಿದ ಅನುಭವ ಇದೆ. ನಿರ್ದೇಶನದ ತರಬೇತಿಯನ್ನೂ ಪಡೆದುಕೊಂಡಿದ್ದಾರೆ. ಆ ಎಲ್ಲ ಅನುಭವವನ್ನು ‘ಶಿವ’ ಮೂಲಕ ಪ್ರೇಕ್ಷಕರ ಮುಂದಿಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ‘ಹಳ್ಳಿ ವಾತಾವರಣದಲ್ಲಿ ಸಿನಿಮಾ ಸಿದ್ಧವಾಗಿದೆ. ಅಲ್ಲೊಂದು ಪ್ರೇಮಕಥೆ, ಹಳ್ಳಿಯ ಕಾದಾಟ, ಲೋಕಲ್ ರಾಜಕಾರಣ ಎಲ್ಲವನ್ನೂ ಬೆರೆಸಿ ಸಿನಿಮಾ ಮಾಡಿದ್ದೇವೆ’ ಎನ್ನುತ್ತಾರೆ ರಘು.

Related