ಶಿರಹಟ್ಟಿ: ಕೊರೊನಾ ಭೀತಿ ಹಿನ್ನೆಲೆ ಮೇ 7 ಮತ್ತು 8 ರಂದು ಜರುಗಬೇಕಿದ್ದ ಶಿರಹಟ್ಟಿ ಶ್ರೀ ಜಗದ್ಗುರು ಫಕ್ಕಿರೇಶ್ವರರ ಜಾತ್ರೆಯು ರದ್ದುಪಡಿಸಲಾಗಿದೆ.
ಪಟ್ಟಣದ ಶ್ರೀ ಜಗದ್ಗುರು ಫಕ್ಕಿರೇಶ್ವರ ಸಂಸ್ಥಾನ ಮಠದಲ್ಲಿ ಪ್ರತಿಕಾಗೋಷ್ಠಿ ನಡೆಸಿ ಮತನಾಡಿದ ಜ.ಫ.ಸಿದ್ದರಾಮ ಶ್ರೀಗಳು, ಭಕ್ತರ ಹಿತದೃಷ್ಠಿಯಿಂದ ಈ ವರ್ಷ ಶ್ರೀ ಫಕ್ಕಿರೇಶ್ವರರ ಜಾತ್ರೆಯನ್ನು ರದ್ದು ಪಡಿಸಿ ಮುಂದಿನ ವರ್ಷ ಅದ್ದೂರಿಯಾಗಿ ಜಾತ್ರೆಯನ್ನು ನಡೆಸೋಣ ಎಂದು ಹೇಳಿದರು.
ದೇಶಕ್ಕೆ ಮತ್ತು ಜನರಿಗೆ ಬಂದಿರುವ ಆಪತ್ತನ್ನು ಮೊದಲು ದೂರು ಮಾಡಿಕೊಳ್ಳೊಣ ನಂತರ ಜಾತ್ರ ಹಬ್ಬ ಹರಿದಿನ ಮಾಡೋಣ. ನಮ್ಮ ಆರೋಗ್ಯದ ದೃಷ್ಠಿಯಿಂದ ಅವರ ಸೇವೆಗೆ ನಾವೆಲ್ಲ ಚಿರಋಣಿಯಾಗಿರಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಮುಖಂಡರಾದ ಡಿ.ಎನ್.ಡಬಾಲಿ, ತಹಶೀಲ್ದಾರ ಯಲ್ಲಪ್ಪ ಗೋಣೆಣ್ಣವರ, ಪಿಎಸ್ಐ ಸುನೀಲಕುಮಾರ ನಾಯಕ, ಹಿರಿಯರಾದ ಯಲ್ಲಪ್ಪಗೌಡ್ರ ಪಾಟೀಲ್, ಹೆಚ್.ಡಿ.ಮಾಗಡಿ, ಚಂದ್ರಣ್ಣ ನೂರಶೆಟ್ಟರ, ಬಿ.ಎಸ್.ಹಿರೇಮಠ, ತೋಟಯ್ಯ ಹಿರೇಮಠ ಮುಂತಾದವರು ಉಪಸ್ಥಿತರಿದ್ದರು.