ಹೊಲಿಗೆ ಯಂತ್ರ ವಿತರಣೆ

ಹೊಲಿಗೆ ಯಂತ್ರ ವಿತರಣೆ

ಕಮಲನಗರ :ತಾಲೂಕಿನ ಮುಧೋಳ ಗ್ರಾಮದ ಅಂಬೇಡ್ಕರ್ ಭವನದಲ್ಲಿ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಮತ್ತು ಸಾಂಸ್ಕೃತಿಕ ಸಂಘದ ಅಧ್ಯಕ್ಷ ಯಶವಂತರಾವ ಬಿರಾದಾರ ಮಹಿಳೆಯರಿಗೆ ಮಂಗಳವಾರ ಹೊಲಿಗೆ ಯಂತ್ರ ವಿತರಿಸಿದರು.
ನಂತರ ಮಾತನಾಡಿ, ಕಲ್ಯಾಣ ಕರ್ನಾಟಕ ಸಂಪನ್ಮೂಲ ಕೃಷಿ ಹಾಗೂ ಸಾಂಸ್ಕೃತಿಕ ಸಂಘ ಕಲಬರುಗಿ ವಿಭಾಗದ ಅಧ್ಯಕ್ಷ ಬಸವರಾಜ ಪಾಟೀಲ್ ಸೇಡಂ ಅವರ ಸಂಸ್ಥೆ ವತಿಯಿಂದ ಕಲಬುರಿಗೆ, ರಾಯಚೂರು, ಬೀದರ್ ಸೇರಿದಂತೆ ಬಡ ಕುಟುಂಬ ಮಹಿಳೆಯರಿಗೆ ಹೊಲಿಗೆ ಯಂತ್ರ ವಿತರಿಸಲಾಗಿದೆ. ಯಂತ್ರದ ಸದುಪಯೋಗ ಪಡೆದು ಸ್ವಾವಲಂಬಿ, ಸುಖಕರ ಜೀವನ ಸಾಗಿಸಲು ಮುಂದಾಗಬೇಕು ಎಂದು ಸಲಹೆ ನೀಡಿದರು.
ಕೃಷಿ ಮತ್ತು ಸಾಂಸ್ಕೃತಿಕ ಸಂಘದ ಔರಾದ ತಾಲ್ಲೂಕು ಅಧ್ಯಕ್ಷ ಗುರುನಾಥ ವಟಗೆ ಮಾತನಾಡಿ, ಕಲ್ಯಾಣ ಕರ್ನಾಟಕ ಸಂಸ್ಥೆಯಿAದ ಕೃಷಿ, ನಿರುದ್ಯೋಗ ನಿವಾರಣೆಗೆ ಹಲವಾರು ಯೋಜನೆಗಳು ಜಾರಿ ಮಾಡಲಾಗಿದೆ. ಇದರ ಸದುಪಯೋಗ ಪಡೆದು ಆರ್ಥಿಕ ಮಟ್ಟವನ್ನು ಬಲಿಷ್ಠಗೊಳಿಸಬೇಕು ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ಗ್ರಾ.ಪಂ ಅಧ್ಯಕ್ಷೆ ಶಾಲಿಯಾ ಲಾಲಾ ಅಹ್ಮದ ವಹಿಸಿದ್ದರು.
ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯ ಗಜಾನಂದ ವಟಗೆ, ಧನರಾಜ ಗುಡ್ಡಾ, ಸಂಸ್ಥೆ ಜಿಲ್ಲಾ ಸಂಯೋಜಕ ಮಹಾದೇವ ಮಸ್ಕಲೆ, ಸುನೀಲ ಬಿಚಕುಂದೆ, ಉದಯ ಸೋಲ್ಲಾಪೂರೆ, ಕಿರಣ ವಟಗೆ, ಸಂತೋಷ ವಾಡೇಕರ, ರಾಜಕುಮಾರ ದೇಸಾಯಿ, ರಾಮ ಮಾನೆ ಇನ್ನಿತರರಿದ್ದರು.

Related