ಗಾಂಜಾ ವಶ: ಆರೋಪಿಗಳ ಬಂಧನ

ಗಾಂಜಾ ವಶ: ಆರೋಪಿಗಳ ಬಂಧನ

 ಚಿಂಚೋಳಿ  : ಚಿಂಚೋಳಿ ತಾಲೂಕಿನ ಮೋಗದುಂಪೂರ ಕ್ರಾಸ್ ಹತ್ತಿರ ಖಚಿತ ಮಾಹಿತಿ ಮೇರೆಗೆ ಸಿಪಿಐ ಮಹಾಂತೇಶ ಪಾಟೀಲ ನೇತೃತ್ವದಲ್ಲಿ 8.ಕೆಜೀ 52ಗ್ರಾಂ.ಗಾಂಜಾ ವಶಪಡಿಸಿಕೊಂಡು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಕುಂಚಾವರಂ ಪಿಎಸ್‌ಐ ಉಪೇಂದ್ರಕುಮಾರ ತಿಳಿಸಿದ್ದಾರೆ.

ಕೋಹೀರ ತಾಂಡೂರ ರೋಡ್ ಮೋಗದುಂಪೂರ ಕ್ರಾಸ್ ಹತ್ತಿರ ತೆಲಂಗಾಣ ಮೂಲದ ವೀರೇಶ,ಮಲ್ಲೇಶ,ಇವರಿಂದ 8 ಕೆ. ಜಿ. 52ಗ್ರಾಂ. ಗಾಂಜಾ ವಶಪಡಿಸಿಕೊಳ್ಳಲಾಗಿದೆ ಇದರ ಮೌಲ್ಯ 25000 ಸಾವಿರ ಎಂದು ಅಂದಾಜಿಸಲಾಗಿದೆ.

ಒAದು ಬಜಾಜ್ ಬೈಕ್, 80 ಸಾವಿರ,ಎ ರಡು ಮೊಬೈಲ್ 12 ಸಾವಿರ ಮೌಲ್ಯ ಎಂದು ಅಂದಾಜಿಸಲಾಗಿದೆ. ಕುಂಚಾವರA ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕುಂಚಾವರಂ ವೈದ್ಯಾಧಿಕಾರಿ ಡಾ.ಜೈಕರ್ ಪರಿಶೀಲನೆ ಮಾಡಿದ್ದಾರೆ.

ತಹಸೀಲ್ದಾರ್ ಅರುಣ ಕುಮಾರ ಕುಲಕರ್ಣಿ, ಮಿರಿಯಾಣ ಪಿಎಸ್‌ಐ ಸಂತೋಷ ರಾಠೋಡ, ಸಿಬ್ಬಂದಿಗಳಾದ ಮಾಳಗೂಂಡ, ಮಂಜುನಾಥ, ಶಿವಪ್ಪಾ,ಬಕ್ಕಪ್ರಭು,ವಿಶ್ವನಾಥ, ಮಲ್ಲಪ್ಪಾ, ಕಾರ್ಯಾಚರಣೆಯಲ್ಲಿ ಇದ್ದರು

Related