ಪ್ರಾಣಿ ಉಳಿಸಿ ಪ್ರಾಣ ಕಳಕೊಂಡ

ಪ್ರಾಣಿ ಉಳಿಸಿ ಪ್ರಾಣ ಕಳಕೊಂಡ

ತುಮಕೂರು, ಫೆ. 13 : ಮನುಷ್ಯನಿಗಿಂತ ಪ್ರಾಣಿಯ ಸ್ನೇಹ ನಿಜಕ್ಕೂ ಅಪಾರ. ದ್ವಿಚಕ್ರ ವಾಹನಕ್ಕೆ ಅಡ್ಡಬಂದ ಜಿಂಕೆಯನ್ನು ರಕ್ಷಿಸಲು ಹೋಗಿ ಶಿಕ್ಷಕರೊಬ್ಬರು ಪ್ರಾಣ ಕಳೆದುಕೊಂಡಿರುವ ಘಟನೆ ಜಿಲ್ಲೆಯ ಶಿರಾ ತಾಲ್ಲೂಕಿನ ಕ್ಯಾದಿಗುಂಡೆ ಬಳಿ ನಡೆದಿದೆ. ನಾದೂರು ಗ್ರಾಮದ ರಾಜಣ್ಣ ಮೃತಪಟ್ಟ ಶಿಕ್ಷಕ.  ಬರಗೂರು ರಂಗಾಪುರ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದು, ಕಾರೇಹಳ್ಳಿ ಗ್ರಾಮದಿಂದ ನಾದೂರಿಗೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದಾಗ ಜಿಂಕೆಯೊಂದು ಗಾಡಿಗೆ ಅಡ್ಡ ಬಂದಿದ್ದು, ಜಿಂಕೆಯ ಪ್ರಾಣ ರಕ್ಷಿಸಲು ಹೋಗಿ ಆಯತಪ್ಪಿ ಕೆಳಗೆ ಬಿದ್ದು ತಲೆಗೆ ಗಂಭೀರ ಪೆಟ್ಟು ಬಿದ್ದ ಪರಿಣಾಮ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ. ಹಿಂಬದಿ ಕುಳಿತಿದ್ದ ರಾಜಣ್ಣ ಅವರ ಪುತ್ರನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Related