ರಕ್ತದಾನದಿಂದ ಜೀವ ಉಳಿಸಿ

ರಕ್ತದಾನದಿಂದ ಜೀವ ಉಳಿಸಿ

ದೇವದುರ್ಗ : ಯುವಕರು ನಿಯಮಿತವಾಗಿ ರಕ್ತದಾನ ಮಾಡುವುದರಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳುವ ಜತೆಗೆ ಅಪಾಯದಲ್ಲಿರುವ ಜೀವಕ್ಕೆ ಜೀವದಾನ ಮಾಡಬಹುದು ಎಂದು ರಿಮ್ಸ್ನ ರಕ್ತನಿಧಿ ಕೇಂದ್ರದ ವೈದ್ಯ ಇಂದರರಾಜ್ ಇಟಗಿ ಹೇಳಿದರು.

ಪಟ್ಟಣದ ವಾಲ್ಮೀಕಿ ಭವನದಲ್ಲಿ ಕಾಂಗ್ರೆಸ್ ನಾಯಕಿ ಶ್ರೀದೇವಿ ರಾಜಶೇಖರ ನಾಯಕ ಜನ್ಮದಿನ ನಿಮಿತ್ತ ಅವರ ಅಭಿಮಾನಿಗಳು ಹಾಗೂ ರಾಯಚೂರಿನ ರಕ್ತನಿಧಿಯಿಂದ ಆಯೋಜಿಸಿದ್ದ ಉಚಿತ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು. 18ರಿಂದ 60ವರ್ಷದೊಳಗಿನ ಪುರುಷರು ಹಾಗೂ ಮಹಿಳೆಯರು ಪ್ರತಿ ಮೂರು ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದು. ಕೊರೊನಾ ಸೇರಿ ಸಂದಿಗ್ದ ಪರಿಸ್ಥಿತಿಯಲ್ಲಿ ರಕ್ತದ ಅಗತ್ಯವಿರುತ್ತದೆ. ನೀವು ಮಾಡುವ ದಾನ ಇನ್ನೊಂದು ಜೀವಕ್ಕೆ ವರದಾನವಾಗಲಿದೆ ಎಂದರು.

ಶ್ರೀದೇವಿ ರಾಜಶೇಖರ ನಾಯಕ ಸೇರಿ 50ಕ್ಕೂ ಹೆಚ್ಚು ಯುವಕರು ಶಿಬಿರದಲ್ಲಿ ರಕ್ತದಾನ ಮಾಡಿದರು. ನಂತರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಅಭಿಮಾನಿಗಳು ಹಾಲು, ಹಣ್ಣು, ಬ್ರೆಡ್ ವಿತರಣೆ ಮಾಡಿದರು.

Related