ಬಿಜೆಪಿಗೆ ಮರು ಸೇರ್ಪಡೆಗೆ ಸವದಿ ಹೇಳಿದ್ದೇನು ?

ಬಿಜೆಪಿಗೆ ಮರು ಸೇರ್ಪಡೆಗೆ ಸವದಿ ಹೇಳಿದ್ದೇನು ?

ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರು ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿ ಪಕ್ಷ ಸೇರಿದ ಬೆನ್ನೆಲು, ಕಾಂಗ್ರೆಸ್ ನ ಶಾಸಕ ಲಕ್ಷ್ಮಣ್ ಸವದಿ ಅವರು ಮತ್ತೆ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿಕೊಳ್ಳುತ್ತಾರೆ ಎಂಬ ಸುದ್ದಿಗಳು ಗ್ರಾಸವಾಗಿ ಚರ್ಚೆಯಾಗುತ್ತಿತ್ತು.

ಆದರೆ ಈ ಸುದ್ದಿಗೆ ಲಕ್ಷ್ಮಣ್ ಸವದಿ ಅವರು ಸ್ಪಷ್ಟ ಮಾಹಿತಿಯನ್ನು ನೀಡಿದ್ದಾರೆ. ಯಾವುದೇ ಕಾರಣಕ್ಕೂ ನಾನು ಮತ್ತೆ ಬಿಜೆಪಿ ಮರು ಸೇರ್ಪಡೆ ಆಗುವುದಿಲ್ಲ. ಈಗಾಗಲೇ ನಾನು ಹತ್ತು ಸಾರಿ ಹೇಳಿದೀನಿ ನಿಮಗೆಲ್ಲ ಮತ್ತೆ 11ನೇ ಸಾರಿ ಕೂಡ ಹೇಳುತ್ತಿದ್ದೇನೆ ನಾನು ಬಿಜೆಪಿಗೆ ಮರು ಸೇರ್ಪಡೆ ಆಗುವುದಿಲ್ಲವೆಂದು ಕಟ್ಟಿಮೂರುದಂತೆ ಹೇಳಿದ್ದಾರೆ.

ದೇವನಹಳ್ಳಿಯಲ್ಲಿರುವ ಇಂಟರ್ನ್ಯಾಷನಲ್ ವಿಮಾನ ನಿಲ್ದಾಣದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದಲ್ಲಿ ನನಗೆ ಒಳ್ಳೆ ಸ್ಥಾನಮಾನವಿದೆ ಹಾಗಾಗಿ ನಾನು ಮತ್ತೆ ಬಿಜೆಪಿ ಕಡೆ ಮುಖ ಮಾಡುವುದಿಲ್ಲವೆಂದು ಹೇಳಿದ್ದಾರೆ.

 

Related