ವಿವಿಧ ಬೇಡಿಕೆಗಳಿಗೆ ಸತ್ಯಾಗ್ರಹ

ವಿವಿಧ ಬೇಡಿಕೆಗಳಿಗೆ ಸತ್ಯಾಗ್ರಹ

ಬೆಳಗಾವಿ : ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಲಿಂಗಾಯತ ಪಂಚಮಸಾಲಿ ಜಗದ್ಗುರುಗಳು ಸುವರ್ಣ ವಿಧಾನಸೌಧದ ಮುಂದೆ ಒಂದು ದಿನದ ಧರಣಿ ಸತ್ಯಾಗ್ರಹ ಆರಂಭಿಸಿದ್ದಾರೆ.

ಕೂಡಲಸಂಗಮ ಮಹಾಪೀಠ ಧರ್ಮಕ್ಷೇತ್ರದ ಲಿಂಗಾಯತ ಪಂಚಮಸಾಲಿ ಜಗದ್ಗುರು ಶ್ರೀ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದ ಧರಣಿಗೆ ನೂರಾರು ಸಂಘಟನೆಗಳು ಬೆಂಬಲ ಸೂಚಿಸಿ, ಧರಣಿ ಕುಳಿತ್ತಿದೆವೆ.

ಬೆಳಗ್ಗೆ ಚನ್ನಮ್ಮ, ಬಸವೇಶ್ವರ, ಅಂಬೇಡ್ಕರ್ ಹಾಗೂ ಸಂಗೊಳ್ಳಿ ರಾಯಣ್ಣ ಪುತ್ಥಳಿಗಳಿಗೆ ಮಾಲಾರ್ಪಣೆ ಮಾಡಿದ ಸ್ವಾಮಿಗಳು ನಂತರ ಧರಣಿ ಆರಂಭಿಸಿದರು. ಸಂಜೆ 4 ಗಂಟೆಯವರೆಗೂ ಧರಣಿ ಮುಂದುವರಿಸಿ, ಪಂಚಮಸಾಲಿ ಜನಾಂಗಕ್ಕೆ ಮೀಸಲಾತಿ, ಸುವರ್ಣ ವಿಧಾನಸೌಧದ ಮುಂದೆ ಚನ್ನಮ್ಮ ಪುತ್ಥಳಿ ಸ್ಥಾಪನೆ ಸೇರಿದಂತೆ ಹಲವು ಬೇಡಿಕೆಗಳನ್ನು ಅವರು ಮುಂದಿಟ್ಟಿದ್ದಾರೆ. ಜಿಲ್ಲಾ ಪಂಚಾಯಿತಿ ಸದಸ್ಯೆ ರೋಹಿಣಿ, ಬಾಬಾಸಾಹೇಬ ಪಾಟೀಲ, ವಿನಯ ಕುಲಕರ್ಣಿ , ಅಡಿವೇಶ ಇಟಗಿ, ಹಾಲಪ್ಪ ನಂದಿಹಳ್ಳಿ ಚನ್ನರಾಜ ಹಟ್ಟಿಹೋಳಿ ಸೇರಿದಂತೆ ಮೊದಲಾದವರು ಪಾಲ್ಗೊಂಡಿದ್ದಾರೆ.

Related