ಪ್ರಚಾರದ ನಡುವೆ ಸತೀಶ್ ರೆಡ್ಡಿ ಟೆಂಪಲ್ ರನ್

ಪ್ರಚಾರದ ನಡುವೆ ಸತೀಶ್ ರೆಡ್ಡಿ ಟೆಂಪಲ್ ರನ್

ಬೊಮ್ಮನಹಳ್ಳಿ: ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆಯ ಕಣ ದಿನದಿಂದ ದಿನಕ್ಕೆ ಬಿರು ಬಿಸಿಲಿನಂತೆ ರಂಗೆರುತ್ತಿದ್ದು, ಕಾಂಗ್ರೆಸ್ ಪಕ್ಷದವರು ಹಿಂದೂ ಸಂಘಟನೆ ಭಜರಂಗದಳ ನಿಷೇಧಿಸುವ ಬಗ್ಗೆ ಮಾತನಾಡುತ್ತಿದ್ದರೆ, ಇತ್ತ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಂ ಸತೀಶ್ ರೆಡ್ಡಿ ಪ್ರಚಾರದ ಜೊತೆ ದೇವರ ಮೊರೆ ಹೋಗಿದ್ದಾರೆ.

ಕಾಂಗ್ರೆಸ್ ‌ಪಕ್ಷ ತನ್ನ ಪ್ರಣಾಳಿಕೆಯಲ್ಲಿ ಹಿಂದೂ ಸಂಘಟನೆ ಸೇರಿದಂತೆ ಸಮಾಜದಲ್ಲಿ ಶಾಂತಿ ಕದಡುವ ಮತ್ತು ಕಾನೂನು ಕೈಗೆತ್ತಿಕೊಳ್ಳುವ ಸಮಾಜ ಘಾತುಕರ ಸಂಘಟನೆಗಳನ್ನು ಬ್ಯಾನ್ ಮಾಡುವುದಾಗಿ ಹೇಳಿದ್ದಾರೆ. ಆದರೆ ಬೊಮ್ಮನಹಳ್ಳಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸತೀಶ್ ರೆಡ್ಡಿ ಜನರ ಬಳಿ ಮತಯಾಚನೆ ಮಾಡುವುದರ ಜೊತೆಗೆ ಎಚ್ಎಸ್ಆರ್ ಬಡಾವಣೆಯ ಸಾಯಿ ಬಾಬಾ ದೇವಾಲಯಕ್ಕೆ ಭೇಟಿ ನೀಡಿ ದೇವರ ಅಶಿರ್ವಾದ ಪಡೆದುಕೊಂಡಿದ್ದಾರೆ.

ಇದೇ ಸಂದರ್ಭದಲ್ಲಿ ಸತೀಶ್ ರೆಡ್ಡಿ ಮಾತನಾಡಿ ಕಾಂಗ್ರೆಸ್ ಪಕ್ಷದವರು ದೇಶದ ಬಹುಸಂಖ್ಯಾತ ಹಿಂದೂಗಳು ಅದರಲ್ಲೂ ಹಿಂದೂ ಸಂಘಟನೆ ಭಜರಂಗದಳವನ್ನು ಬ್ಯಾನ್ ಮಾಡಲು ಮುಂದಾಗಿರುವುದು ಒಂದು ಸಮುದಾಯದ ಒಲೈಕೆ ರಾಜಕಾರಣ.

ಕಾಂಗ್ರೆಸ್ ಒಲೈಕೆ ರಾಜಕಾರಣಕ್ಕೆ ರಾಜ್ಯದ ಜನರು ಬೆಂಬಲಿಸುವುದಿಲ್ಲ. ಕಲೆ, ಸಂಸ್ಕೃತಿ ಸಂಸ್ಕಾರವನ್ನು ಪಾಲಿಸುವ ಬಿಜೆಪಿ ಪಕ್ಷಕ್ಕೆ ಮತದಾರ ಪ್ರಭು ಜೈ ಎನ್ನಲಿದ್ದಾನೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

 

Related