ನಿಮ್ಮ ಮನೆ ಮಗನಿಗೆ ಮತ್ತೊಮ್ಮೆ ಅವಕಾಶ ನೀಡಿ

ನಿಮ್ಮ ಮನೆ ಮಗನಿಗೆ ಮತ್ತೊಮ್ಮೆ ಅವಕಾಶ ನೀಡಿ

ಬೊಮ್ಮನಹಳ್ಳಿ: ಸಾಮಾನ್ಯ ವರ್ಗದವರು, ಬಡ ವರ್ಗದವರೇ ಹೆಚ್ಚಾಗಿರುವ ಕ್ಷೇತ್ರದ ಬಂಡೇಪಾಳ್ಯ, ಜರಗನಹಳ್ಳಿ, ಕೋಡಿಚಿಕ್ಕನಹಳ್ಳಿ ಫಣುಭಾವಿಗಳಿಗೆ ನೂರಾರು ಮನೆಗಳನ್ನು ನಿರ್ಮಿಸಿಕೊಟ್ಟನಹಳ್ಳಿಯ ಬಿಜೆಪಿ ಅಭ್ಯರ್ಥಿ ಎಂ. ಸತೀಶ್ ರೆಡ್ಡಿ ನುಡಿದರು.

ಇಂದು ಕ್ಷೇತ್ರದ ಹಲವೆಡೆ ಚುನಾವಣಾ ಪ್ರಚಾರ ನಡೆಸಿ ಮಾತನಾಡಿದ ಸತೀಶ್ ರೆಡ್ಡಿ 15 ವರ್ಷಗಳಿಂದ ಕ್ಷೇತ್ರದ ಶಾಸಕರು ಮೂಲಭೂತ ಸೌರ ್ಯಗಳನ್ನು ಕಲ್ಪಿಸಿದ್ದಾರೆ. ಅದರಲ್ಲೂ ಬಂಡೆಪಾಳ್ಯ, ಕೋಡಿಚಿಕ್ಕನಹಳ್ಳಿ, ಜರಗನಹಳ್ಳಿ, ಅರಕೆರೆಯಲ್ಲಿ ಉಚಿತ ಫಲಾನುಭವಿಗಳಿದ್ದು, ಅವರೆಲ್ಲರಿಗೂ ಮನೆ ನಿರ್ಮಾಣ, ಕುಡಿಯುವ ನೀರು, ರಸ್ತೆ, ಇನ್ನಿತರೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಟ್ಟಿದ್ದಾರೆ. ಅಂದಿನಿಂದಲೂ ತಾವುಗಳು ನನ್ನನ್ನು ಮನೆ ಮಗನಂತೆ ಹರಸಿ ಹಾರೈಸಿದ್ದಾರೆ. ಈ ಬಾರಿಯೂ ಮತ್ತಷ್ಟು ಅಭಿವೃದ್ದಿ ಕಾರ್ಯಗಳನ್ನು ಮಾಡುವ ಹಂಬಲವಿದ್ದು, ನಿಮ್ಮ ಮನೆಗೆ ಮತ್ತೊಮ್ಮೆ ಅವಕಾಶ ನೀಡಿ, ಆಶೀರ್ವದಿಸಿ ಹರಸಿ ಎಂದು ಮತ ಯಾಚಿಸಿದರು.

ಈ ಸಂದರ್ಭದಲ್ಲಿ ಮಾಜಿ ಮಹಾನಗರ ಪಾಲಿಕೆ ಸದಸದ್ಯರಾದ ಶೋಭಾ ಮುನಿರಾಂ, ಮಾಜಿ ನಗರಸಭಾ ಸದಸ್ಯ ಮುನಿರಾಂ, ಬಿಜೆಪಿ ಮುಖಂಡ ಎ.ಟಿ. ಲೋಕೇಶ್, ಮಾಜಿ ನಗರಸಭಾ ಸದಸ್ಯರಾದ ಲತಾ ವೆಂಕಟೇಶ್, ಪಕ್ಷದ ಸ್ಥಳೀಯ ಸಂಸ್ಥೆ, ಕಾರ್ಯಕರ್ತರು ಹಾಗೂ ಮತದಾರ ಬಾಂಧವರು.

Related