RSS ಆಳ, ಅಗಲ ಕೃತಿ ಅಲ್ಲ ವಿಕೃತ – ಪ್ರತಾಪ್ ಸಿಂಹ

RSS ಆಳ, ಅಗಲ ಕೃತಿ ಅಲ್ಲ ವಿಕೃತ – ಪ್ರತಾಪ್ ಸಿಂಹ

ಸಾಹಿತಿ ದೇವನೂರು ಮಹಾದೇವ ಅವರ RSS ಆಳ ಮತ್ತು ಅಗಲ ಕೃತಿ ಅಲ್ಲ ವಿಕೃತಿ ಎಂದು ಸಂಸದ ಪ್ರತಾಪ್ ಸಿಂಹ ಲೇವಡಿ ಮಾಡಿದ್ದಾರೆ. ಮೈಸೂರು ನಗದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಆಳಾಗಿ ಬರೆಯುವವರಿಗೆ RSS ಅನ್ನು ಅರ್ಥೈಸಿಕೊಳ್ಳಲು ಆಗಲ್ಲ. ಅಂತಹವರು RSS ಬಗ್ಗೆ ತಿಳಿದುಕೊಳ್ಳಲು ಸಾಧ್ಯವಿಲ್ಲ. ದೇವನೂರು ಮಹಾದೇವ ಅವರು ಒಂದು ಪಕ್ಷದ ಆಳಾಗಿ ಬರೆದಿದ್ದಾರೆ.

ಅವರ ಕುಸುಮಬಾಲೆ ಬಳಿಕ ಸೃಜನಶೀಲತೆ ಉಳಿದಿದೆ ಅಂದುಕೊಂಡಿದ್ದೆ ಆದರೆ, ಈಗ ತಮ್ಮ ಘನತೆಯನ್ನು ದೇವನೂರು ಅವರು ಕಳೆದುಕೊಂಡಿದ್ದಾರೆ ಎಂದು ಹೇಳಿದ್ದಾರೆ. ಚಾತುವರ್ಣ ಪದ್ದತಿ ಬಿಟ್ಟು ಎಷ್ಟೋ ವರ್ಷ ಕಳೆದಿದೆ. ರಾಹುಲ್ ಗಾಂಧಿ ಭಾಷಣ ಪ್ರೇರಣೆಯಿಂದ ಬರೆದಂತಿದೆ. ದೇವನೂರು ಬರೆದ ಪುಸ್ತಕ ಕಾಂಗ್ರೆಸ್ ಕಾರ್ಯಕರ್ತ ಬರೆದಂತಿದೆ. ಈ ಪುಸ್ತಕಕ್ಕೆ ದೇವನೂರು ಮಹಾದೇವ ಅವರ ಹೆಸರು ಹಾಕಿದ್ದಾರೆ ಎಂದು ಕಿಡಿಕಾರಿದ್ದಾರೆ.

Related