ಮಗು ಪತ್ತೆಗೆ 1ಲಕ್ಷ ರುಪಾಯಿ ಬಹುಮಾನ ಘೋಷಣೆ

ಮಗು ಪತ್ತೆಗೆ 1ಲಕ್ಷ ರುಪಾಯಿ ಬಹುಮಾನ ಘೋಷಣೆ

ರಾಮನಗರ: ಕಳೆದ ನಾಲ್ಕು ದಿನಗಳ ಹಿಂದೆ ಮನೆ ಮುಂದೆ ಆಟವಾಡುತ್ತಿದ್ದ ಬಾಲಕ, ಮನೆಯ ಕೂಗಳತೆ ದೂರದಲ್ಲಿ ಇದ್ದ ಅಂಗಡಿಯಲ್ಲಿ ಬಲೂನು ತರಲು ಹೋಗಿ ಬಾಲಕ ನಾಪತ್ತೆಯಾಗಿರುವ ಘಟನೆ ರಾಮನಗರದ ಮೆಹಬೂಬ್ ನಗರದಲ್ಲಿ ನಡೆದಿದೆ.
ರಾಮನಗರದ ಮೆಹಬೂಬ್ ನಗರದ ಸುಮೇರ್ ಖಾನ್ ಹಾಗೂ ಅಲ್ಮಜ್ ಬೇಗಂ ಅವರ ೪ ವರ್ಷದ ಸಾಕು ಮಗ ದಯಾನ್ ಖಾನ್ ಕಾಣೆಯಾಗಿದ್ದಾನೆ. ಕಳೆದ ಸೋಮವಾರ ರಾತ್ರಿ ೯ ಗಂಟೆ ಸುಮಾರಿಗೆ ಬಾಲಕ ಆಟವಾಡಿಕೊಂಡು ಮನೆಯಿಂದ ಹೊರ ಬಂದಿದ್ದಾನೆ.
ಈ ಸಂಬಂಧ ಮಗುವಿನ ಪೋಷಕರು ರಾಮನಗರ ನಗರ ಪೊಲೀಸ್ ಠಾಣೆಯಲ್ಲಿ ದೂರು ಕೂಡ ದಾಖಲು ಮಾಡಿದ್ದಾರೆ ಹಾಗೂ ಬಾಲಕನನ್ನು ಪತ್ತೆ ಮಾಡಿ ಕೊಟ್ಟವರಿಗೆ ೧ ಲಕ್ಷ ರುಪಾಯಿ ನಗದು ಬಹುಮಾನ ಘೋಷಣೆ ಮಾಡಿದ್ದಾರೆ.
ಬಹಳ ವರ್ಷಗಳಿಂದ ಮಕ್ಕಳಿಲ್ಲದೆ ಕೊರುಗುತ್ತಿದ್ದ ದಂಪತಿಗೆ ಈ ಬಾಲಕ ದತ್ತು ಮಗನ ರೂಪದಲ್ಲಿ ಮನೆ ಮಗನಾಗಿ ಬಂದಿದ್ದ. ಆದರೆ ಇದೀಗ ಮನೆ ಮಗನೆ ಕಾಣೆಯಾಗಿದ್ದು, ಇಡೀ ಕುಟುಂಬ ಕಳೆದ ನಾಲ್ಕು ದಿನಗಳಿಂದ ಪ್ರತಿನಿತ್ಯ ಕಣ್ಣೀರಲ್ಲಿ ಕೈತೊಳೆಯುತ್ತಿದೆ.

Related