ರಸ್ತೆ ಅಪಘಾತ: ಮೂವರು ದುರ್ಮರಣ

ರಸ್ತೆ ಅಪಘಾತ: ಮೂವರು ದುರ್ಮರಣ

ಧಾರವಾಡ : ಕಾರು ಮತ್ತು ಲಾರಿ ನಡುವೆ ಮುಖಾಮುಖಿ ಅಪಘಾತ ಸಂಭವಿಸಿ ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಧಾರವಾಡ ಹೊರವಲಯದ ಸವದತ್ತಿ ರಸ್ತೆಯಲ್ಲಿ ನಡೆದಿದೆ.

ಕಾರು ಸವದತ್ತಿಯಿಂದ ಹುಬ್ಬಳ್ಳಿ ಕಡೆಗೆ ಹೊರಟಿತ್ತು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ಕಬ್ಬಿನ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಮೃತಪಟ್ಟಿದ್ದಾರೆ.

ಮೂವರು ಸವದತ್ತಿ ಮೂಲದವರು ಎಂದು ತಿಳಿದು ಬಂದಿದೆ. ರೇವಣಸಿದ್ಧಯ್ಯ ಇಚ್ಚಂಗಿ (46), ವಿಜಯಾ ಇಚ್ಚಂಗಿ (42) ಹಾಗೂ ನಾಗರಾಜ ಇಚ್ಚಂಗಿ (35) ಮೃತ ದುರ್ದೈವಿಗಳು. ರೇವಣಸಿದ್ಧಯ್ಯಗೆ ಹುಬ್ಬಳ್ಳಿಗೆ ಡಯಾಲಿಸಿಸ್ ಮಾಡಿಸಲು ಖಾಸಗಿ ಆಸ್ಪತ್ರೆಗೆ ತೆಗೆದುಕೊಂಡು ಹೋಗುವಾಗ ಈ ಅಪಘಾತ ಸಂಭವಿಸಿದೆ. ಮೃತ ರೇವಣಸಿದ್ಧಯ್ಯ ಹಾಗೂ ವಿಜಯಾ ಪತಿಯಾಗಿದ್ದು, ನಾಗರಾಜ್ ರೇವಣಸಿದ್ಧಯ್ಯ ಸಹೋದರನಾಗಿದ್ದಾನೆ. ರೇವಣಸಿದ್ಧಯ್ಯ ಸವದತ್ತಿಯಲ್ಲಿ ಫೋಟೊಗ್ರಾಫರ್ ಕೆಲಸ ಮಾಡುತಿದ್ದ. ಸದ್ಯ ಘಟನಾ ಸ್ಥಳಕ್ಕೆ ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯ ಪೊಲೀಸರು ಭೇಟಿ ನೀಡಿ, ಕಾರಿನಲ್ಲಿದ್ದ ಶವಗಳನ್ನು ಜಿಲ್ಲಾ ಆಸ್ಪತ್ರೆಗೆ ರವಾನೆ ಮಾಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Related