ಹಲ್ಲೆ ಘಟನೆ ಖಂಡಿಸಿ ಪೌರ ಕಾರ್ಮಿಕರಿಂದ ಮನವಿ

ಹಲ್ಲೆ ಘಟನೆ ಖಂಡಿಸಿ ಪೌರ ಕಾರ್ಮಿಕರಿಂದ ಮನವಿ

ಸಿಂದಗಿ, ಏ. 06: ಪಟ್ಟಣದ ಪುರಸಭೆ ಮುಖ್ಯಾಧಿಕಾರಿ ಮೇಲೆ ಹಲ್ಲೆ ಮಾಡಿದ ಸದಸ್ಯನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಕರ್ನಾಟಕ ರಾಜ್ಯ ಪೌರಸೇವಾ ನೌಕರರ ಸೇವಾ ಸಂಘ(ರಿ)ದ ಸಿಂದಗಿ ಶಾಖೆಯ ಪೌರ ಕಾರ್ಮಿಕರು ಕಪ್ಪು ಪಟ್ಟಿ ಧರಿಸಿ ಆಗ್ರಹಿಸಿ ತಹಸೀಲ್ದಾರ ಸಂಜೀವಕುಮಾರ ದಾಸರ ಅವರಿಗೆ ಇಂದು ಮನವಿ ಸಲ್ಲಿಸಿದರು.

ಕಳೆದ ಏ.4ರಂದು ಕರ್ತವ್ಯ ನಿರತ ಮುಖ್ಯಾಧಿಕಾರಿ ಸಯ್ಯೀದ್‌ಅಹ್ಮದ್ ಅವರ ಮೇಲೆ ದೈಹಿಕ ಹಲ್ಲೆ ಮಾಡಿದ ನೂತನ ಸದಸ್ಯ ಶರಣಗೌಡ ಪಾಟೀಲ ನಡೆ ಖಂಡಿಸಿ ಸದಸ್ಯತ್ವದಿಂದ ವಜಾಗೊಳಿಸುವಂತೆ ಪೌರಕಾರ್ಮಿಕರು ಒತ್ತಾಯಿಸಿದರು.

ಈ ವೇಳೆ ಎ.ಎಸ್.ಪಾಂಡೆ, ಇಂದುಮತಿ ಮಣ್ಣೂರ, ದಯಾನಮ ಇವಣಿ, ರಮೇಶ ಪಾಟೀಲ, ಸರೋಜಿನಿ ಬಸವರಾಜ, ಕಲ್ಲಪ್ಪ ಚೌರ, ಅಬ್ಬಾಸಲಿ ಕಾಖಂಡಕಿ, ಮುಬಾರಕ ಪಡೇಕನೂರ, ಭೀಮು ಕಾಂಬಳೆ ಸೇರಿದಂತೆ ಎಲ್ಲ ಪೌರ ಕಾರ್ಮಿಕರು ಇದ್ದರು.

ಸಿಂದಗಿ ಪಟ್ಟಣದಪುರಸಭೆ ಮುಖ್ಯಧಿಕಾರಿ ಮೇಲೆ ನಡೆದ ಮಾರಣಾಂತಿಕ ಹಲ್ಲೆ ಖಂಡಿಸಿ, ಪೌರ ಕಾರ್ಮಿಕರ ಸಿಂದಗಿ ಶಾಖೆಯ ಕಾರ್ಮಿಕರು ಕಪ್ಪು ಪಟ್ಟಿ ಧರಿಸಿ ಆರೋಪಿ ಸದಸ್ಯ ಶರಣಗೌಡ ಪಾಟೀಲ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸುತ್ತಿರುವುದು.

Related