ರಸ್ತೆ ಕಾಮಗಾರಿ ಶೀಘ್ರ ಮುಗಿಸಲು ಮನವಿ

ರಸ್ತೆ ಕಾಮಗಾರಿ ಶೀಘ್ರ ಮುಗಿಸಲು ಮನವಿ

ತುರುವೇಕೆರೆ : ಪಟ್ಟಣದಿಂದ ದಬ್ಬೇಘಟ್ಟ ರಸ್ತೆಯ ಚಿಕ್ಕ ಬೆನಕನಕೆರೆ ಗಡಿಯವರೆಗೂ ರಸ್ತೆ ತಾಲ್ಲೂಕಿನ ಮಾಯಸಂದ್ರ ರಸ್ತೆ,ತಿಪಟೂರು ರಸ್ತೆ, ಬಾಣಸಂದ್ರ ರಸ್ತೆಗಳ ಅಗಲೀಕರಣ ಕಾಮಗಾರಿ ಶೀಘ್ರ ಆರಂಭಕ್ಕೆ ಒತ್ತಾಯಿಸಿ ಜಿಲ್ಲಾ ಉಸ್ತುವಾರಿ ಸಚಿವರಾದ ಜೆ ಸಿ ಮಾಧುಸ್ವಾಮಿ ಹಾಗೂ ಶಿಕ್ಷಣ ಸಚಿವರಾದ ಬಿ.ಸಿ ನಾಗೇಶ್ ಅವರಿಗೆ ಮನವಿ ಪತ್ರ ಕೊಡುವ ಉದ್ದೇಶವಿತ್ತು.

ದಬ್ಬೇಘಟ್ಟದಲ್ಲಿ ನೆಡೆಯುವ ಕಾರ್ಯಕ್ರಮಕ್ಕೆ ಸಚಿವರುಗಳು ಆಗಮಿಸುವ ನಿರೀಕ್ಷೆಯಿಂದ ಸಚಿವರುಗಳಿಗೆ ಮನವಿ ಪತ್ರ ಸಲ್ಲಿಸಲು ಸುಬ್ರಮಣಿ ಶ್ರೀಕಂಠೇಗೌಡರ ನೇತೃತ್ವದಲ್ಲಿ ಹಾಗೂ ವಿವಿಧ ಪ್ರಗತಿಪರ ಸಂಘಟನೆಗಳು ಆದರೆ ಸಚಿವರುಗಳು ಕಾರಣಾಂತರಗಳಿಂದ ಬಾರದ ಹಿನ್ನೆಲೆಯಲ್ಲಿ ಪಟ್ಟಣದ ದಬ್ಬೇಘಟ್ಟ ರಸ್ತೆ ಅಗಲೀಕರಣ ಕಾರ್ಯ ಕುಂಠಿತಗೊAಡಿದ್ದು ಶೀಘ್ರದಲ್ಲೇ ರಸ್ತೆ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ಆಗ್ರಹಿಸಿ ಪಟ್ಟಣದ ತಾಲ್ಲೂಕು ಕಚೇರಿಗೆ ಸಂಘಟನೆಗಳೊಂದಿಗೆ ತೆರಳಿ ಉಪತಹಸೀಲ್ದಾರ್, ಸುನಿಲ್ ಕುಮಾರ್ ವರಿಗೆ ಮನವಿ ಪತ್ರವನ್ನು ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಜಿ ಆರ್ ರಂಗೆಗೌಡ್ರು, ವಿವಿಧ ಪ್ರಗತಿ ಪರ ಸಂಘಟನೆಗಳ ಅಧ್ಯಕ್ಷರುಗಳಾದ ಶ್ರೀನಿವಾಸ್ ಗೌಡ , ಸುರೇಶ್, ಪ ಪಂಚಾಯತ್ ಸದಸ್ಯರಾದ ಯಜಮಾನ್ ಮಹೇಶ್, ಮೇಘನಾ ಸುನಿಲ್, ದಬ್ಬೇಘಟ್ಟ ಸೊಸೈಟಿ ಉಪಾಧ್ಯಕ್ಷರಾದ ಬಿ ಟಿ ಕೃಷ್ಣೆ ಗೌಡ್ರು, ಮಹಾಲಿಂಗಪ್ಪ,ಸತೀಶ್, ಮಾರುತಿ, ಚಂದ್ರು, ವೇಣುಗೋಪಾಲ್, ಕೀರ್ತಿ ರಾಜ್,ಅರವಿಂದ್, ಬಸವರಾಜ್, ಯೋಗಾನಂದ್, ತಮಣ್ಣ, ಮುಧಣ್ಣ, ರಾಮಸ್ವಾಮಿ, ಧನುಷ್ ಹಾಗೂ ಸಂಘಟನೆಗಳ ಸದಸ್ಯರುಗಳು ಕಾರ್ಯಕರ್ತರು ಬಾಗವಹಿಸಿದ್ದರು.

Related