ಹೊಸಪೇಟೆ: ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಪ್ರವಾಸಿ ಮಂದಿರದ ಹತ್ತಿರವಿರುವ ಸರ್ಕಲ್ ಗೆ ಡಾ.ಬಿ ಆರ್ ಅಂಬೇಡ್ಕರ್ ವೃತ್ತ ಎಂದು ನಾಮಕರಣ ಮಾಡುವ ಮನವಿಯನ್ನು ಜಿಲ್ಲಾಧಿಕಾರಿಗಳಿಗೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ಭೀಮವಾದ, ಹರಪನಹಳ್ಳಿ ತಾಲೂಕಿನ ಪದಾಧಿಕಾರಿಗಳು ಕಾರ್ಯಕರ್ತರು ಸೇರಿ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿದರು.
ಈ ಸಂಬಂಧ ಭೀಮವಾದ ಜಿಲ್ಲಾಧ್ಯಕ್ಷರಾದ ಹನುಮಂತಪ್ಪ (ಚಿನ್ನು) ಮಾತನಾಡಿ, ಹರಪನಹಳ್ಳಿ ಪಟ್ಟಣದ ಹೃದಯ ಭಾಗದಲ್ಲಿರುವ ಪ್ರವಾಸಿ ಮಂದಿರದ ಬಳಿ ಇರುವ ಸರ್ಕಲ್ ಅನ್ನು ಸುಮಾರು ವರ್ಷಗಳಿಂದ ಐಬಿ ಸರ್ಕಲ್ ಎಂದು ಸಾರ್ವಜನಿಕರು ಮಾತನಾಡುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಸರ್ಕಲ್ ಗೆ ಡಾ.ಬಿ ಆರ್ ಅಂಬೇಡ್ಕರ್ ಹೆಸರನ್ನು ಅಧಿಕೃತವಾಗಿ ನಾಮಕರಣ ಮಾಡಬೇಕೆಂದು ಹೇಳಿದರು.
ಸಂಘದ ತಾಲೂಕಿನ ಸಂಚಾಲಕರಾದ ಶುಭಾಶ್ ಕೆ ಮಾತನಾಡಿ, ಡಾ. ಬಿಆರ್ ಅಂಬೇಡ್ಕರ್ ಅವರ ಜನ್ಮದಿನದ ಏಪ್ರಿಲ್ 14 ನೇ ತಾರೀಖಿನ ಒಳಗಾಗಿ ಮಾನ್ಯ ಜಿಲ್ಲಾಧಿಕಾರಿಗಳು ಐಬಿ ಸರ್ಕಲ್ ಎಂದು ಕರೆಯುವ ಈ ವೃತ್ತಕ್ಕೆ ಸಂವಿಧಾನ ಶಿಲ್ಪಿಯಾದ ಡಾ. ಅಂಬೇಡ್ಕರ್ ಹೆಸರು ದಾಖಲೆಯಲ್ಲಿ ನಮೂದಿಸಬೇಕೆಂದು ಒತ್ತಾಯಿಸಿದರು.
ಕಚೇರಿ ಮುಂಭಾಗ ಸಂಕೇತಿಕವಾಗಿ ಮನವಿ ಪತ್ರವನ್ನು ಜಿಲ್ಲಾಧಿಕಾರಿಗಳಾದ ಎಂ ಎಸ್ ದಿವಾಕರ್ ಅವರಿಗೆ ನೀಡಿದರು. ಮನವಿಯನ್ನು ಸ್ವೀಕರಿಸಿದ ಜಿಲ್ಲಾಧಿಕಾರಿ ನಾನು ಸಂಬಂಧಪಟ್ಟ ಅಧಿಕಾರಿಗಳ ಜೊತೆಗೆ ಮಾತನಾಡಿ ನಿಮಗೆ ತಿಳಿಸುತ್ತೇನೆ ಎಂದು ಹೇಳಿದರು.
ಈ ವೇಳೆ ಸಂಘದ ಗೌರವಾಧ್ಯಕ್ಷರಾದ ರಮೇಶ್ ಮಾಳಗಿ, ಪ್ರಧಾನ ಕಾರ್ಯದರ್ಶಿ, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಸಾವಿತ್ರಿ,ಪ್ರಕಾಶ್, ಸಹ ಕಾರ್ಯದರ್ಶಿ ಮಲ್ಲಿಕಾರ್ಜುನ, ಖಜಾಂಚಿ ಛತ್ರಪತಿ,ಕಾರ್ಯಕರ್ತರಾದ ಚಂದ್ರಪ್ಪ, ಅಂಜಿನಪ್ಪ,ನಾಗೇಂದ್ರಪ್ಪ, ಸುರೇಶ,ಹನುಮಂತ, ಭಾರತ,ಕೋಟಪ್ಪ, ಬಸವರಾಜ, ನಾಗರಾಜ, ಮೂಕಪ್ಪ, ಹೆಚ್ ಬಿ ಶ್ರೀನಿವಾಸ ಇದ್ದರು.
(ವರದಿಗಾರ:ನಎ ಚಿದಾನಂದ, ವಿಜಯನಗರ)