ರೆಡ್ಡಿ ವರ್ಸಸ್ ಗೌಡ ಪಾಲಿಟಿಕ್ಸ್ ವಿಚಾರವಾಗಿ ಸ್ಪಷ್ಟನೆ ನೀಡಿದ ಆರ್. ಅಶೋಕ್

ರೆಡ್ಡಿ ವರ್ಸಸ್ ಗೌಡ ಪಾಲಿಟಿಕ್ಸ್ ವಿಚಾರವಾಗಿ ಸ್ಪಷ್ಟನೆ ನೀಡಿದ ಆರ್. ಅಶೋಕ್

ಬೊಮ್ಮನಹಳ್ಳಿ: ಶಾಸಕ ಎಂ. ಸತೀಶ್ ರೆಡ್ಡಿಯವರು ಒಕ್ಕಲಿಗ ನಾಯಕ. ಅವರ ಜಾತಿ ಪ್ರಮಾಣ ಪತ್ರದಲ್ಲಿಯೂ ಸಹ ಒಕ್ಕಲಿಗ ಎಂದು ನಮೂದಾಗಿದೆ ಎಂದು ಕಂದಾಯ ಸಚಿವ ಆರ್. ಅಶೋಕ್‌ರವರು ನುಡಿದರು.
ಇಂದು ಬೊಮ್ಮನಹಳ್ಳಿ ಕ್ಷೇತ್ರದ ಅರಕೆರೆ ವಾರ್ಡ್ ಹಾಗೂ ಪುಟ್ಟೇನಹಳ್ಳಿ ವಾರ್ಡ್ನಲ್ಲಿ ಶಾಸಕ ಎಂ. ಸತೀಶ್ ರೆಡ್ಡಿಯವರ ಪರ ಕಂದಾಯ ಸಚಿವ ಆರ್. ಅಶೋಕ್ ರವರು ರೋಡ್‌ಶೋ ನಡೆಸಿ ಮತಯಾಚನೆ ಮಾಡಿ, ಪತ್ರಕರ್ತರೊಂದಿಗೆ ಮಾತನಾಡುತ್ತಾ, ಬೊಮ್ಮನಹಳ್ಳಿ ಕ್ಷೇತ್ರದಲ್ಲಿ ರೆಡ್ಡಿ ವರ್ಸಸ್ ಗೌಡ ಪಾಲಿಟಿಕ್ಸ್ ವಿಚಾರವಾಗಿ ಸ್ಪಷ್ಟನೆ ನೀಡಿದರು. ಸತೀಶ್ ರೆಡ್ಡಿಯವರು ಸಹ ಒಕ್ಕಲಿಗನೆಂದು ಒಕ್ಕಲಿಗ ಸಮುದಾಯದವನಾದ ನಾನು ಸರ್ಟಿಫಿಕೇಟ್ ಮಾಡುತ್ತಿದ್ದೇನೆ. ಸತೀಶ್ ರೆಡ್ಡಿ ನನ್ನ ಸಹೋದರನಿದ್ದಂತೆ. ಒಕ್ಕಲಿಗ ಸಮುದಾಯಕ್ಕೆ ಕಾಂಗ್ರೆಸ್ಸಿಗರ ಕೊಡುಗೆ ಏನು? ವಿಧಾನ ಸೌಧ ಮತ್ತು ಏರ್‌ರ್ಪೋರ್ಟ್ ಬಳಿ ಕೆಂಪೇಗೌಡರ ಪ್ರತಿಮೆ ನಿರ್ಮಿಸಿದ್ದು ಬಿಜೆಪಿ. ಕಾಂಗ್ರೆಸ್‌ನವರು ಇಂಟರ್‌ನ್ಯಾಷನಲ್ ನಟರನ್ನು ಪ್ರಚಾರಕ್ಕೆ ಕರೆಸಿದರು ಡೋಂಟ್ ಕೇರ್ ಎಂದರು.
ಬಿಜೆಪಿ ಪಕ್ಷ ನಟ, ಸಾಹಿತಿ ಸೇರಿದಂತೆ ಕೂಲಿ ಕಾರ್ಮಿಕರಿಗು ಸ್ವಾಗತ ಬಯಸುತ್ತೇವೆ. ನಮ್ಮ ಮೇಲೆ ಪ್ರೀತಿಯಿಂದ ನಟ ಸಾಹಿತಿಗಳು ಪ್ರಚಾರಕ್ಕೆ ಆದ್ರೆ ಕಾಂಗ್ರೆಸ್ ಬಗ್ಗೆ ನಟರಿಗೆ ಒಲವಿಲ್ಲ. ಕಾಂಗ್ರೆಸ್ಸಿಗರ ಜಾತಿ ರಾಜಕಾರಣ ತಪ್ಪು ಎಂದು ಅಶೋಕ್ ವಾಗ್ದಾಳಿ ಕಾಂಗ್ರೆಸ್ ಅಭ್ಯರ್ಥಿ ಉಮಾಪತಿ ವಿರುದ್ಧ ವಾಗ್ದಾಳಿ ನಡೆಸಿದರು.
ಈ ಸಂದರ್ಭದಲ್ಲಿ ಚಲನಚಿತ್ರ ನಟರಾದ ಸಿಹಿ ಕಹಿ ಚಂದ್ರು, ಬಿಜೆಪಿ ಮಂಡಲ ಅಧ್ಯಕ್ಷರಾದ ಶಿವಾಜಿ, ನಿಕಟಪೂರ್ವ ಬಿಬಿಎಂಪಿ ಸದಸ್ಯರಾದ ಪುರುಷೋತ್ತಮ್ (ರವಿ), ಜಲ್ಲಿ ರಮೇಶ್, ಪ್ರಭಾವತಿ ರಮೇಶ್, ಮಾಜಿ ನಗರಸಭಾ ಸದಸ್ಯ ಮುರಳಿ, ಹಿರಿಯ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

Related