ಜನ ಸೇವೆ ಮಾಡಲು ರೆಡಿ

ಜನ ಸೇವೆ ಮಾಡಲು ರೆಡಿ

ರಾಮದುರ್ಗ:ಸಾರ್ವಜನಿಕರ ಮತ್ತು ಲಯನ್ಸ್ ಸದಸ್ಯರ ಸಹಕಾರದಿಂದ ಕೊರೋನಾ   ಭೀತಿಯ ಮಧ್ಯ ಲಯನ್ಸ್ ಸಂಸ್ಥೆ ಸಮಾಜಕ್ಕೆ ಅಗತ್ಯವಿರುವ ಸೇವೆ ಮಾಡಲು ಸಿದ್ದವಿದೆ ಎಂದು ಲಯನ್ಸ್ ಸಂಸ್ಥೆಯ ನೂತನ ಅಧ್ಯಕ್ಷ ಎ. ಜಿ. ಮಳಗಲಿ ಹೇಳಿದರು.

ಪಾಲರೇಶಾ ಕಣ್ಣಿನ ಆಸ್ಪತ್ರೆಯಲ್ಲಿ ನಡೆದ ಲಯನ್ಸ್ ಸಂಸ್ಥೆಯ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದ ಅವರು ಸಂಸ್ಥೆಯ ಹಿರಿಯರು ನೀಡಿರುವ ಜವಾಬ್ದಾರಿಯನ್ನು ನಿರ್ವಹಿಸಲು ತಮ್ಮೆಲ್ಲರ ಮಾರ್ಗದರ್ಶನ ಅಗತಯವಿದೆ ಎಂದರು.

ಪ್ರೊ. ಮಹಾಂತೇಶ ಹೊಳಿಮಠ ಮಾತನಾಡಿ, ಜೀವನದ ಎಲ್ಲ ಕೆಲಸಗಳ ಮದ್ಯೆ ಸಮಾಜಸೇವೆ ಮಾಡು ಸಮಯ ಮಾಡಿಕೊಂಡು ಕೈಲಾದಷ್ಟು ಜನಸೇವೆ ಮಾಡಬೇಕು ಅಂದರೆ ಬದುಕು ಸಾರ್ಥಕವಾಗುತ್ತದೆ ಎಂದು ಹೇಳಿದರು.

ಎಂಜೆಎಫ್ ವೆಂಕಟೇಶ ಹಿರೇರಡ್ಡಿ ನೂತನ ಪದಾಧಿಕಾರಿಗಳಿಗೆ ಪ್ರತಿಜ್ಞಾವಿಧಿ ಭೋಧಿಸಿ

ಮಾತನಾಡಿ ಲಯನ್ಸ್ ಸಂಸ್ಥೆಯ ಧ್ಯೇಯೋದ್ಧೇಶಗಳಿಗೆ ಅನುಗುಣವಾಗಿ ಮತ್ತು ಜನರಿಗೆ ಅವಶ್ಯವಿರುವ ಕೆಲಸ ಮಾಡುವತ್ತ ನೂತನ ಆಡಳಿತ ಸದಸ್ಯರು ಗಮನ ಹರಿಸಬೇಕೆಂದು ಹೇಳಿದರು.

Related