ಅತ್ಯಾಚಾರ : ಸರ್ಕಾರ ವಜಾಕ್ಕೆ ಆಗ್ರಹ

ಅತ್ಯಾಚಾರ : ಸರ್ಕಾರ ವಜಾಕ್ಕೆ ಆಗ್ರಹ

ಕಲಬುರಗಿ : ಬಹುಜನ ಸಮಾಜ ಪಕ್ಷದ ತಾಲೂಕು ಘಟಕಾ ಚಿಂಚೋಳಿಯವರಿಂದ ಉತ್ತರಪ್ರದೇಶ ರಾಜ್ಯದಲ್ಲಿ ನಿರಂತರ ಹೆಣ್ಣು ಮಕ್ಕಳು ಮೇಲೆ ಅತ್ಯಾಚಾರ ಪ್ರಕರಣ ಮತ್ತು ಕೊಲೆ ಪ್ರಕರಣಗಳು ಹೆಚ್ಚಾಗುತ್ತಿದ್ದು ಕೂಡಲೇ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಬಿಜೆಪಿ ಸರ್ಕಾರವನ್ನು ವಜಾ ಮಾಡಿ ರಾಷ್ಟ್ರಪತಿ ಆಳ್ವಿಕೆಯನ್ನು ಹೇರುವಂತೆ ಬಹುಜನ ಪಕ್ಷದವರು ಆಗ್ರಹಿಸಿದರು.

ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳನ್ನು ನ್ಯಾಯಾಂಗ ತನಿಖೆಗೆ ಒಳಪಡಿಸುವಂತೆ ಆಗ್ರಹಿಸಿ ತಹಸೀಲ್ದಾರರು ಚಿಂಚೋಳಿ ರವರ ಮುಖಾಂತರ ರಾಷ್ಟ್ರಪತಿಗಳು ಮನವಿ ಪತ್ರವನ್ನು ಸಲ್ಲಿಸಿದರು.

ಈ ಸಂದರ್ಭದಲ್ಲಿ ಬಹುಜನ ಸಮಾಜ ಪಕ್ಷ ತಾಲೂಕು ಅಧ್ಯಕ್ಷರಾದ ವೈಜಿನಾಥ ಮಿತ್ರ, ಜಿಲ್ಲಾ ಕಾರ್ಯದರ್ಶಿಯಾದ ರಘುವೀರ ಭೀಮಸೈನಿಕ್, ಸುನೀಲ ತ್ರೀಪಾಟಿ, ರಘುವಿರ ಕೊಡಂಬಲ್, ಶಿವಲಿಂಗ ದೋಟಿಕೊಳ, ಚಂದ್ರಶೇಖರ ಹಾಗೂ ಇತರಾರು ಪಾಲ್ಗೊಂಡಿದ್ದರು.

Related