ಬೆಂಗಳೂರು: ಇಂದು ದೇಶದಲ್ಲಿ ಐತಿಹಾಸಿಕ ದಿನವಾಗಿದ್ದು ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ಆಗಿದೆ. ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆ ಬಹಳ ಸಡಗರ ಸಂಭ್ರಮದಿಂದ ನಡೆಯಿತು.
ಕೇವಲ ಅಯೋಧ್ಯೆಯಲ್ಲಿ ಮಾತ್ರವಲ್ಲದೆ ದೇಶದಾದ್ಯಂತ ರಾಮ ಮಂದಿರಗಳಲ್ಲಿ ಇಂದು ವಿಶೇಷ ಪೂಜೆ ಸಲ್ಲಿಸಿ ರಾಮಭಕ್ತರು ರಾಮನ ಜಪ ಮಾಡಿದರು.
ಇನ್ನು ಸಾರಿಗೆ ಸಚಿವರಾಗಿರುವಂತಹ ರಾಮಲಿಂಗ ರೆಡ್ಡಿ ಅವರು, ಬಾಲಬ್ರುಹಿ ಅತಿಥಿಗೃಹದ ಹತ್ತಿರ ಇರುವ ಮಾರುತಿ ಭಗವಾನ್ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಭಕ್ತರಿಗೆ ಸಿಹಿ ಹಂಚುವ ಮೂಲಕ ರಾಮಭಕ್ತಿ ಮೆರೆದಿದ್ದಾರೆ.