ವಿಜಯಪುರ: ಇಂದಿನಿಂದ ಬಿಜಾಪುರ ಜಿಲ್ಲೆಯಲ್ಲಿ ಮೂರು ದಿನಗಳ ಕಾಲ ಕೃಷಿ ಮೇಳ ನಡೆಯುತ್ತಿದ್ದು ಈ ಕೃಷಿ ಮೇಳದಲ್ಲಿ ವಿಶೇಷವಾಗಿ ಫಲಪುಷ್ಪಗಳ ಪ್ರದರ್ಶನ ನಡೆಯುತ್ತಿದೆ. ಇನ್ನು ಈ ಫಲ ಪುಷ್ಪ ಪ್ರದರ್ಶನದಲ್ಲಿ ಶ್ರೀರಾಮ ಮಂದಿರ ಮೂಡಿ ಬಂದಿದ್ದು ಎಲ್ಲರ ಕಣ್ಮಣ ಸೆಳೆದಿದೆ. ಹತ್ತಾರು ಪುಷ್ಪಗಳಲ್ಲಿ ಶ್ರೀರಾಮ ಮಂದಿರ ಚಿತ್ರ ಬಿಡಿಸಿದ್ದು ಎಲ್ಲರ ಗಮನ ಸೆಳೆಯಿತು. ಹೂವುಗಳಲ್ಲಿ ಅರಳಿದ ರಾಮ ಮಂದಿರ.
ಹೌದು, ವಿಜಯಪುರ ಜಿಲ್ಲೆಯಲ್ಲಿ ಇಂದಿನಿಂದ ಮೂರು ದಿನಗಳ ಕಾಲ ಕೃಷಿ ಮೇಳ. ಈ ವರ್ಷ ಭೀಕರ ಬರ ಜಿಲ್ಲೆಯಲ್ಲಿ ಮನೆ ಮಾಡಿದೆ. ಬರದ ಮಧ್ಯೆಯೇ ಕೃಷಿ ಮೇಳ ಆಯೋಜನೆ ಮಾಡಿದ್ದು ಜಿಲ್ಲೆಯ ರೈತರಿಗೆ ಸಂತಸ ತಂದಿದೆ. ಬರವನ್ನು ಮರೆ ಮಾಚುವಂತೆ ಕೃಷಿ ಮೇಳ ಆಯೋಜನೆ ಮಾಡಲಾಗಿದೆ. ನಗರದ ಹೊರ ಭಾಗದಲ್ಲಿರೋ ಕೃಷಿ ಮಹಾವಿದ್ಯಾಲಯದ ಆವರಣದಲ್ಲಿ ಆಯೋಜನೆಗೊಂಡ ಮೇಳಕ್ಕೆ ಜನಸಾಗರವೇ ಹರಿದು ಬಂದಿದೆ.
ವಿಜಯಪುರ ನಗರದ ಹೊರ ಭಾಗದಲ್ಲಿರೋ ಕೃಷಿ ಮಹಾವಿದ್ಯಾಲಯದ ಆವಣದಲ್ಲಿ ಕೃಷಿ ಮೇಳೆ ಆಯೋಜಿಸಲಾಗಿದೆ. ಕೃಷಿ ಮೇಳಕ್ಕೆ ಶಾಸಕರಾದ ವಿಠಲ ಕಟಕದೊಂಡ ರಾಜೂಗೌಡ ಪಾಟೀಲ್ ಚಾಲನೆ ನೀಡಿದರು.