ಮಳೆರಾಯನ ಆರ್ಭಟ

ಮಳೆರಾಯನ ಆರ್ಭಟ

ಬೈಲಹೊಂಗಲ : ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಪಟ್ಟಣದಲ್ಲಿ ಧಾರಕಾರ ಮಳೆ ಸುರುದಿದೆ. ಮಂಗಳವಾರ ಸುರಿದಯಿಂದ ಆಣೆಕಲ್ಲು ಮಳೆಗೆ ಪಟ್ಟಣ, ಗ್ರಾಮಗಳಲ್ಲಿ ಮಳೆಗೆ ಗಿಡ ಮರಗಳು, ವಿದ್ಯುತ್ತ್ ಕಂಬಗಳು ಧರೆಗುರಳಿವೆ. ಜೋರಾದ ಗಾಳಿಗೆ ಪಟ್ಟಣದ ಸಂಗೊಳ್ಳಿ ರಾಯಣ್ಣ ವೃತ್ತದ ಬಸ್ ನಿಲ್ದಾಣ ಸಮೀಪದ ಉಜ್ಜಿವ್ ಬ್ಯಾಂಕ್, ಸಂಗಮ ಟಾಕೀಜ, ಮಹಾದೇವ ಸ್ವಾಮಿ ಮಠದ ಹತ್ತಿರ ಮರಗಳು ಧರೆಗುರುಳಿವೆ, ಮರವೊಂದು ಉರುಳಿದ ಪರಿಣಾಮ ನಾಲೈದು ಬೈಕ್‌ಗಳು ಬುಡದಲ್ಲಿ ಸಿಕ್ಕಿಗೊAಡಿವೆ.

ಜನ ಸಂಚಾರಕ್ಕೆ ಅಡಚಣೆವುಂಟಾಯಾಗಿದು, ಗಟಾರಗಳು ತುಂಬಿ ಹರಿದವು ಅನೇಕ ಮನೆಗಳ ತಗಡುಗಳು ಹಾರಿಹೋಗಿವೆ. ವಿದ್ಯುತ್ತ್ ಕಂಬಗಳು ನೆಲಕಚ್ಚಿವೆ, ವಕ್ಕುಂದ ಗ್ರಾಮದಲ್ಲಿ ವೀರಭದ್ರೇಶ್ವರ ದೇವಸ್ಥಾನ ಸೂತ್ತಲು ನೀರು ನುಗ್ಗಿದೆ. ರೈತರ ಜಮೀನಿಗೆ ನೀರು ಹರಿದು ಅಪಾರ ಬೆಳೆ ನಷ್ಟವಾಗಿದೆ.

Related