ರಾಹುಲ್ ಗಾಂಧಿ ಹೇಳಿಕೆ ಸತ್ಯ- ಯು.ಟಿ ಖಾದರ್

ರಾಹುಲ್ ಗಾಂಧಿ ಹೇಳಿಕೆ ಸತ್ಯ- ಯು.ಟಿ ಖಾದರ್

ಮಂಗಳೂರು, ಜುಲೈ 20 : ಕೇಂದ್ರ ಸರ್ಕಾರದಿಂದ ದಿನ ಬಳಕೆಯ ವಸ್ತುಗಳ ಮೇಲೆ ತೆರಿಗೆ ಹೆಚ್ಚಳವನ್ನು ವಿಧಾನಸಭೆ ವಿಪಕ್ಷ ಉಪನಾಯಕ ಯುಟಿ ಖಾದರ್ ಖಂಡಿಸಿದ್ದಾರೆ. ರಾಹುಲ್ ಗಾಂಧಿ ಅಂದೇ ಜಿಎಸ್‌ಟಿಯನ್ನು ‘ಗಬ್ಬರ್ ಸಿಂಗ್ ಟಾಕ್ಸ್’ ಅಂತಾ ಹೇಳಿದ್ದರು. ಆಗ ಜನ ಎಲ್ಲಾ ರಾಹುಲ್ ಗಾಂಧಿ ಮಾತಿಗೆ ನಕ್ಕಿದ್ದರು. ಆದರೆ ಈಗ ರಾಹುಲ್ ಮಾತು ನಿಜ ಅಂತಾ ಜನರಿಗೆ ಗೊತ್ತಾಗುತ್ತಿದೆ ಎಂದು ಯುಟಿ ಖಾದರ್ ಹೇಳಿದ್ದಾರೆ.

ಮಂಗಳೂರಿನ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಯುಟಿ ಖಾದರ್, ಮಕ್ಕಳು ತಿನ್ನುವ ಆಹಾರ, ಬಳಸುವ ಪೆನ್ನು, ಪೆನ್ಸಿಲ್‌ಗೂ ತೆರಿಗೆ ಹಾಕಿದೆ. ಅಕ್ಕಿಗೆ ಬೇರೆ ಮಂಡಕ್ಕಿಗೆ ಬೇರೆ ತೆರಿಗೆ ಹಾಕಿದೆ.

ಸರ್ಕಾರ ಎಲ್ಲದ್ದಕ್ಕೂ ಟಾಕ್ಸ್ ಹಾಕಿ ಆಯಿತು, ಇನ್ನು ಶವ ಎತ್ತಿಕೊಂಡು ಹೋಗುವುದಕ್ಕೂ ಟಾಕ್ಸ್ ಹಾಕದಿದ್ದರೆ ಸಾಕು. ಇಷ್ಟೆಲ್ಲಾ ತೆರಿಗೆ ಹಾಕಿದರೂ ಜನೋಪಯೋಗಿ ಯೋಜನೆ ಒಂದೂ ತರಲಿಲ್ಲ. ಜಿಎಸ್‌ಟಿಯಲ್ಲಿ ರಾಜ್ಯಕ್ಕೆ ಬಹುದೊಡ್ಡ ಅನ್ಯಾಯ ಮಾಡಿದೆ. ಆದರೆ ರಾಜ್ಯದ ಸಂಸದರೆಲ್ಲಾ ಬಾಯಿಗೆ ಪ್ಲಾಸ್ಟರ್ ಹಾಕಿಕೊಂಡು ಸುಮ್ಮನೆ ಕುಳಿತಿದ್ದಾರೆ ಎಂದು ಯುಟಿ ಖಾದರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Related