‘ಮತದಾನದ ಹಕ್ಕಿದೆ ಎನ್ನುವುದಕ್ಕೆ ಹೆಮ್ಮೆ’

‘ಮತದಾನದ ಹಕ್ಕಿದೆ ಎನ್ನುವುದಕ್ಕೆ ಹೆಮ್ಮೆ’

ಗಂಗಾವತಿ : ಗಂಗಾವತಿ  ತಾಲೂಕು ಶ್ರೀರಾಮನಗರ ಗ್ರಾಮದಲ್ಲಿ ನಡೆಯುತ್ತಿರುವ ಎರಡನೇ ಹಂತದ ಗ್ರಾಮ ಪಂಚಾಯಿತಿ ಚುನಾವಣೆಗೆ, ಯುವಕ-ಯುವತಿಯರು ಆಗಮಿಸಿ ಪ್ರಥಮ ಬಾರಿಗೆ ತಮ್ಮ ಮತದಾನದ ಹಕ್ಕನ್ನು ಚಲಾಯಿಸಿದರು.

ಇದಕ್ಕೆ ಪ್ರೇರಣೆ ನೀಡಿದ ಗಂಗಾವತಿ ತಾಲೂಕು ಪಂಚಾಯಿತಿ ಮುಖ್ಯಾಧಿಕಾರಿ ಡಾ. ಮೋಹನ್ ಕುಮಾರ್ ಅವರು, ಇದೇ ಮೊದಲನೇ ಬಾರಿ ಮತದಾನದಲ್ಲಿ ಭಾಗವಹಿಸಿದ ಯುವಕ ಯುವಕರಿಗೆ ಪುಸ್ತಕ ನೀಡಿ ಅಭಿನಂದಿಸಿದರು.

ಭಾರತೀಯ ಜವಾಬ್ದಾರಿಯುತ ಪ್ರಜೆಯಾಗಿ, ನನ್ನ ಮತದಾನದ ಹಕ್ಕನ್ನು ಚಲಾಯಿಸಿದ್ದಕ್ಕೆ ನನಗೆ ತುಂಬಾ ಖುಷಿಯಾಗುತ್ತದೆ. ನನಗೂ ಒಂದು ಮತದಾನದ ಹಕ್ಕಿದೆ ಎಂದು ಹೇಳಿಕೊಳ್ಳುವುದಕ್ಕೆ ಹೆಮ್ಮೆ ಆಗುತ್ತದೆ ಎಂದು ಅಲ್ಲಿನ ಯುವಕ-ಯುವತಿಯರು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು.

Related