ಸ್ಥಳೀಯರಿಗೆ ಆದ್ಯತೆ ನೀಡಿ

ಸ್ಥಳೀಯರಿಗೆ ಆದ್ಯತೆ ನೀಡಿ

ಚಿಂಚೋಳಿ : ಟೋಲ್ ಗೇಟ್‌ನಲ್ಲಿ ವಿವಿಧ ಉದ್ಯೋಗಗಳಲ್ಲಿ ಸ್ಥಳೀಯರಿಗೆ ಅವಕಾಶ ನೀಡಬೇಕೆಂದು ತಾಲೂಕು ತಹಶೀಲ್ದಾರ್ ಅವರಿಗೆ ತಾಲ್ಲೂಕು ನಾಗರಿಕ ಹಿತರಕ್ಷಣಾ ವೇದಿಕೆ ಸಮಿತಿ ಸಂಚಾಲಕರು ಆನಂದ್ ಟೈಗರ್ ಮನವಿ ಪತ್ರ ನೀಡಿದರು.

ತಾಲ್ಲೂಕಿನ ಐನೋಳ್ಳಿ ದೇಗಲಮಡಿ ಹತ್ತಿರ ಕರ್ನಾಟಕ ರಾಜ್ಯ ರಸ್ತೆ ಅಭಿವೃದ್ಧಿ ನಿಗಮದಿಂದ ನಿರ್ಮಿಸುತ್ತಿರುವ ಟೋಲ್‌ಗೇಟ್‌ನಲ್ಲಿ ವಿವಿಧ ಹುದ್ದೆಗಳು ಇದ್ದು ಸ್ಥಳೀಯರಿಗೆ ಆದ್ಯತೆ ನೀಡಬೇಕು ತಾಲ್ಲೂಕಿನ ಜನರು ಪ್ರವಾಹಗೂ ಕೋ ಬಿಡ್‌ನಿಂದ ತತ್ತರಿಸಿದಾರೆ.

ಅನೇಕರು ಉದ್ಯೋಗ ಕಳೆದುಕೊಂಡು ಮನೆಯಲ್ಲಿ ಕುಳಿತುಕೊಂಡಿದ್ದಾರೆ. ಆ ಬಡ ಕುಟುಂಬಕ್ಕೆ ಟೋಲ್ ಗೇಟ್‌ನಲ್ಲಿ ವಿವಿಧ ಹುದ್ದೆಗಳಿಗೆ ಸ್ಥಳೀಯರಿಗೆ ನೇಮಕ ಮಾಡಿಕೊಡಬೇಕೆಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಶಶಿ ಮೇತ್ರಿ, ತುಳಸಿರಾಮ್, ರಮೇಶ್ ಕೋಹಿರ್ ಇನ್ನೂ ಹಲವಾರು ಜನ ಉಪಸ್ಥಿತರಿದ್ದರು.

Related