ಅಮೂಲ್ಯಳಿಗೆ ನ್ಯಾಯವಾದಿ ಸಾಥ್

ಅಮೂಲ್ಯಳಿಗೆ ನ್ಯಾಯವಾದಿ ಸಾಥ್

ರಾಯಚೂರು, ಫೆ. 22 : ಪಾಕಿಸ್ತಾನ ಪರವಾಗಿ ಜಿಂದಾಬಾದ್ ಎಂದು ಘೋಷಣೆ ಕೂಗಿದ ಅಮೂಲ್ಯ ಲಿಯೋನ್ ಳಿಗೆ ಜಿಲ್ಲೆಯ ವಕೀಲರಾದ ಎಸ್. ಮಾರೆಪ್ಪ ಬೆಂಬಲಿಸಿದ್ದಾರೆ. ಪಾಕಿಸ್ತಾನ ಪರವಾಗಿ ಜಿಂದಾಬಾದ್ ಎಂದು ಘೋಷಣೆ ಕೂಗಿದ ಅಮೂಲ್ಯ ಲಿಯೋನ್ ಹೇಳಿಕೆಗೆ ಎಲ್ಲೆಡೆ ವ್ಯಾಪಕ ವಿರೋಧ ವ್ಯಕ್ತವಾಗಿದ್ದರೆ, ಈ ಬಗ್ಗೆ ಜಿಲ್ಲೆಯ ಟಿಪ್ಪು ಸುಲ್ತಾನ್ ಗಾರ್ಡನ್ ನಲ್ಲಿ ಸಿಎಎ ಹಾಗೂ ಎನ್ಆರ್ಸಿ, ಎನ್ ಆರ್ಪಿ ವಿರೋಧಿಸಿ ಕಳೆದ ಜ. 26 ರಿಂದ ಸಂವಿಧಾನ ಹಕ್ಕುಗಳ ನಾಗರಿಕ ವೇದಿಕೆಯಿಂದ ನಡೆಯುತ್ತಿರುವ ಅನಿರ್ಧಿಷ್ಟಾವಧಿ ಧರಣಿಯಲ್ಲಿ ಮಾತನಾಡಿ, ಅಮೂಲ್ಯ ಹೇಳಿಕೆಯಲ್ಲಿ ತಪ್ಪಿಲ್ಲ ಎಂದು ಹೇಳಿದ್ದಾರೆ.
ಅಂತೆಯೇ ವಕೀಲರಾಗಿರುವ ಎಸ್. ಮಾರೆಪ್ಪ ಮಾತನಾಡಿ, ಅವಳಿಗೆ ಪೂರ್ಣವಾಗಿ ಮಾತನಾಡಲು ಬಿಡಬೇಕಿತ್ತು. ಅಮೂಲ್ಯ ಮಾತುಗಳಿಗೆ ನಮ್ಮ ಬೆಂಬಲವಿದೆ. ಮಾತನಾಡಲು ಬಿಡದೆ ಕೇಸ್ ಹಾಕಿದ್ದಾರೆ ಎಂದು ಆಯೋಜಕರನ್ನ ಜರಿದಿದ್ದಾರೆ.

Related