ಶಬರಿಮಲೆ ಅಯ್ಯಪ್ಪ ಭಕ್ತರಿಗೆ ಮುಸ್ಲಿಂ ಮನೆಯಿಂದ ಪ್ರಸಾದ ವ್ಯವಸ್ಥೆ

  • In State
  • December 25, 2023
  • 92 Views
ಶಬರಿಮಲೆ ಅಯ್ಯಪ್ಪ ಭಕ್ತರಿಗೆ ಮುಸ್ಲಿಂ ಮನೆಯಿಂದ ಪ್ರಸಾದ ವ್ಯವಸ್ಥೆ

ರಾಯಚೂರು: ಹಿಂದೂ ಮುಸ್ಲಿಂ, ಎಂದು ಬಡಿದಾಡಿಕೊಳ್ಳುತ್ತಿರುವವರ ಮಧ್ಯೆ ರಾಯಚೂರು ಜಿಲ್ಲೆಯಲ್ಲಿ ಮುಸ್ಲಿಂ ಒಬ್ಬರ ಮನೆಯಲ್ಲಿ ಸಂಕ್ರಾಂತಿ ಪ್ರಯುಕ್ತ ಅಯ್ಯಪ್ಪ ಮಾಲಾಧಾರಿಗಳಿಗೆ ಮುಸ್ಲಿಂ ಮನೆಯಲ್ಲಿಯೇ ಪ್ರಸಾದ ವ್ಯವಸ್ಥೆ ಮಾಡಿ ಬಾವೇಕ್ಯತೆ ಮೆರೆದಿರುವುದು ಎಲ್ಲರ ಮೆಚ್ಚುಗೆ ಕಾರಣವಾಗಿದೆ.

ಹೌದು ರಾಜ್ಯದಲ್ಲಿ ಇತ್ತೀಚೆಗೆ ಹಿಜಾಬ್‌ ನಿಷೇಧದ ಬಗ್ಗೆ ಮಾತುಕತೆ ಜೋರಾಗಿಯೇ ನಡೆಯುತ್ತಿದ್ದು ಇದರ ಬೆನ್ನೆಲು ಮುಸ್ಲಿಮರ ಮನೆಯಲ್ಲಿ ಅಯ್ಯಪ್ಪ ದೇವರಿಗೆ ಮಾಲೆಧರಿಸಿರುವವರೆಗೆ 50 ಜನರಿಗೆ ಮುಸ್ಲಿಂ ಮುಖಂಡರ ಮನೆಯಲ್ಲಿ ಪ್ರಸಾದ ವ್ಯವಸ್ಥೆ ಮಾಡಿರೋದು ಕಂಡು ಬಂದಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಹಿಂದೂ-ಮುಸ್ಲಿಂ ಎಂದು ಹೊಡೆದಾಡುವವರಿಗೆ, ರಾಯಚೂರು ಜಿಲ್ಲೆಯ ಕವಿತಾಳ ಪಟ್ಟಣ ಹಿಂದೂ-ಮುಸ್ಲಿಮರ ಭಾವೈಕ್ಯತೆಯ ಸಂದೇಶ ಸಾರಿದೆ. ಅಯ್ಯಪ್ಪ ಮಾಲಾಧಾರಿಗಳಿಗೆ ಮುಸಲ್ಮಾನರ ಮನೆಯಲ್ಲಿ ಪ್ರಸಾದ ವ್ಯವಸ್ಥೆ ಮಾಡಲಾಗಿದೆ. ಮುಸ್ಲಿಂ ಮುಖಂಡರಾದ ಬಿ.ಎ.ಕರೀಮ್ ಸಾಬ್ ಮನೆಯಲ್ಲಿ 50ಕ್ಕೂ ಹೆಚ್ಚು ಅಯ್ಯಪ್ಪ ಮಾಲಾಧಾರಿಗಳಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿದ್ದು, ಪೂಜೆ ನಂತರ ತಾವೇ ಖುದ್ದಾಗಿ ಪ್ರಸಾದ ಬಡಿಸಿದ್ದಾರೆ.

Related