ಪ್ರಭು ಚವ್ಹಾಣ್ ನೆರವು

ಪ್ರಭು ಚವ್ಹಾಣ್ ನೆರವು

ಕಮಲನಗರ: ಕ್ಯಾನ್ಸರ್ ರೋಗದಿಂದ ಮರಣ ಹೊಂದಿದ ಕಮಲನಗರ ತಾಲೂಕಿನ ಸಂಗಮ್ ಗ್ರಾಮದ ರಾಜಶ್ರೀ ಅವರ ಕುಟುಂಬಸ್ಥರಿಗೆ ಪಶುಸಂಗೋಪನೆ ಆಗುವುದು ಬೀದರ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ ನೆರವು ನೀಡಿದರು.

ಸಚಿವರ ನಿವಾಸಕ್ಕೆ ಶನಿವಾರ ಮಕ್ಕಳೊಡನೆ ಆಗಮಿಸಿದ ಮೃತರ ಪತಿ ಸಂಗಮೇಶ್ ವಿಳಾಸಪೂರೆ ಅವರು ತಮ್ಮ ಸಮಸ್ಯೆಗಳನ್ನು ಸಚಿವರೊಂದಿಗೆ ಹಂಚಿಕೊಂಡರು. ಅವರ ಕಷ್ಟಗಳನ್ನು ಆಲಿಸಿದ ಸಚಿವರು ಕುಟುಂಬದ ನಿರ್ವಹಣೆ ಹಾಗೂ ಮಕ್ಕಳ ವಿದ್ಯಾಭ್ಯಾಸದ ದೃಷ್ಟಿಯಿಂದ ವಯಕ್ತಿಕ ಧನಸಹಾಯ ಮಾಡಿದರು.

ಮುಂದಿನ ದಿನಗಳಲ್ಲಿ ಯಾವುದೇ ರೀತಿಯ ಸಮಸ್ಯೆಗಳಿದ್ದಲ್ಲಿ ತಮ್ಮನ್ನು ಸಂಪರ್ಕಿಸಬಹುದು ಎಂದು ಧೈರ್ಯ ತುಂಬಿದರು.

Related