ರಾಮ ಮಂದಿರಕ್ಕೆ 50 ಕೋಟಿ ರೂ ದೇಣಿಗೆ ನೀಡಿದ ಪ್ರಭಾಸ್!

ರಾಮ ಮಂದಿರಕ್ಕೆ 50 ಕೋಟಿ ರೂ ದೇಣಿಗೆ ನೀಡಿದ ಪ್ರಭಾಸ್!

ಇಡೀ ದೇಶದ ಹಿಂದೂ ಜನಗಳು ಕಾತುರದಿಂದ ಕಾಯುತ್ತಿರುವ ಕ್ಷಣ ಇನ್ನೇನು ಬಂದೇಬಿಡ್ತು. ಹೌದು ಇದೇ ಜನವರಿ 22ರಂದು ಇಡೀ ದೇಶದ ಜನ ಕಾಯುತ್ತಿರುವ ರಾಮ ಮಂದಿರ ಉದ್ಘಾಟನೆಗೆ ಸಮಯ ಕೂಡಿ ಬಂದಿದ್ದು, ಈ ಉದ್ಘಾಟನೆ ಸಮಾರಂಭಕ್ಕೆಂದು ದೇಶದ ಮೂಲೆ ಮೂಲೆಯಿಂದ ರಾಮಭಕ್ತರು ತಮ್ಮ ಕೈಲಾದ ದೇಣಿಗೆಯನ್ನು ನೀಡಿದ್ದಾರೆ.

ಸಿನಿಮಾ ರಂಗದಿಂದ ಹಿಡಿದು ರಾಜಕೀಯ ವ್ಯಕ್ತಿಗಳು ಕ್ರಿಕೆಟ್ ಆಟಗಾರರು ಸೇರಿದಂತೆ ಇಡೀ ದೇಶದಾದಂತ ರಾಮ ಮಂದಿರ ಉದ್ಘಾಟನೆಗೆ ತಮ್ಮ ಕೈಲಾದ ಹಣವನ್ನು ನೀಡಿದ್ದಾರೆ.

ಇನ್ನು ತೆಲುಗು ಚಿತ್ರರಂಗದ ಬಹುಬೇಡಿಕೆಯ ನಟ ಆಗಿರುವ ಪ್ರಭಾಸ್ ಅವರು ರಾಮಮಂದಿರ ಉದ್ಘಾಟನೆಗೆಂದು ಸುಮಾರು 50 ಕೋಟಿ ರೂ. ನೀಡುವ ಮೂಲಕ ಮತ್ತೆ ಅಭಿಮಾನಿಗಳ ಮನ ಗೆದ್ದಿದ್ದಾರೆ.

ಇನ್ನು ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆದ ಸುಮಾರು 300 ಸ್ಥಳಗಳಿಗೆ ಅನ್ನದಾನ ವ್ಯವಸ್ಥೆ ಮಾಡಲಾಗುತ್ತಿದೆ. ದೇವಾಲಯ ತೆರೆಯುವ ದಿನದಂದು ಪ್ರಭಾಸ್ ದೇಣಿಗೆ ನೀಡಲಿದ್ದಾರೆ ಎಂದು ವರದಿಯಾಗಿದೆ. ವರದಿಯ ಪ್ರಕಾರ, ಅಯೋಧ್ಯೆ ಪ್ರತಿಷ್ಠಾ ದಿನದಂದು ಆಹಾರದ ವೆಚ್ಚ ಬರೋಬ್ಬರಿ 50 ಕೋಟಿಗೂ ಹೆಚ್ಚು ಎಂದು ಅಂದಾಜಿಸಲಾಗಿದೆ.  ಪ್ರಭಾಸ್ ಸಂಪೂರ್ಣ ವೆಚ್ಚವನ್ನು ಭರಿಸಲು ನಿರ್ಧರಿಸುವ ಮೂಲಕ ರಾಮಮಂದಿರದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸುವ ಎಲ್ಲಾ ಭಕ್ತರಿಗೆ ಔತಣವನ್ನು ಏರ್ಪಡಿಸುವ ವ್ಯವಸ್ಥೆ ವಹಿಸಿಕೊಂಡಿದ್ದಾರೆ.  ಸುಮಾರು 50 ಕೋಟಿ ರೂಪಾಯಿಗಳ ಅಂದಾಜು ವೆಚ್ಚದೊಂದಿಗೆ ನಟನು ಊಟಕ್ಕೆ ಹಣವನ್ನು ನೀಡುತ್ತಿದ್ದಾನೆ.

 

Related