‘ಶೌಚಾಲಯ ಸಂಪೂರ್ಣ ಕಳಪೆ’

‘ಶೌಚಾಲಯ ಸಂಪೂರ್ಣ ಕಳಪೆ’

ಶಹಾಪುರ :ತಾಲೂಕಿನ ಗೋಗಿ ಕೆ ಗ್ರಾಮದಲ್ಲಿ 2020-21ನೇ ಸಾಲಿನ 15ನೇ ಹಣಕಾಸು ಯೋಜನೆ ಯಡಿಯಲ್ಲಿ ನಿರ್ಮಿಸುತ್ತಿರುವ ಶೌಚಾಲಯವು ಸಂಪೂರ್ಣ ಕಳಪೆಯಿಂದ ಕೂಡಿದ್ದು, ತೆರವುಗೊಳಿಸಿ ಮತ್ತೊಮ್ಮೆ ಶೌಚಾಲಯ ನಿರ್ಮಿಸಬೇಕೆಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಭೀಮ ಘರ್ಜನೆ ತಾಲ್ಲೂಕು ಸಂಚಾಲಕ ಜಯರೆಡ್ಡಿ ಹೊಸ್ಮನಿ ಆಗ್ರಹಿಸಿದರು.
ಗೋಗಿ ಗ್ರಾ.ಪಂ ಅಭಿವೃದ್ಧಿ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿ ಮಾತಾನಾಡಿದ ಅವರು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಿರ್ಮಿಸಲಾಗುತ್ತಿರುವ ಶೌಚಾಲಯ ಕಟ್ಟಡವು ಕಳಪೆ ಮಟ್ಟದಿಂದ ಕೂಡಿದ್ದು, ಕಾಮಗಾರಿಗೆ ಸರಿಯಾದ ತಳಪಾಯನು ಹಾಕದೇ ಅರ್ಥಂಬರ್ಧ ಮಾಡಿ ಕೈತೊಳೆದು ಕೊಂಡಿದೆ. ಸರಿಯಾದ ಕಂಕರ್, ಸಿಮೆಂಟ್ ಸಹ ಹಾಕಿಲ್ಲ, ಆದ್ದರಿಂದ ಮತ್ತೊಮ್ಮೆ ಸರಿಯಾದ ರೀತಿಯಲ್ಲಿ ಬೇಸ್ಮಂಟ್ ಹಾಕಿ ಕಟ್ಟಡ ನಿರ್ಮಾಣ ಮಾಡಬೇಕು ಎಂದು ತಿಳಿಸಿದರು. ಅಧಿಕಾರಿ ಮಲ್ಲಣ್ಣ ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಈ ಸಂದರ್ಭದಲ್ಲಿ ಮಲ್ಲಿಕಾರ್ಜುನ ಹಾಲಭಾವಿ, ಮಾಳಪ್ಪ ಸಲಾದಪೂರ ಇತರರು ಇದ್ದರು.

Related