ಬೆಳಗಾವಿ, ಏ. 18 : ಕೊರೊನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ವಿಧಿಸಲಾಗಿರುವ ಲಾಕ್ ಡೌನ್ ನಲ್ಲಿ ಕಾರ್ಯ ನಿರ್ವಹಿಸಲು ಆಗಮಿಸುತ್ರಿದ್ದ ವೇಳೆ ನಡೆದ ರಸ್ತೆ ಅಪಘಾತದಲ್ಲಿ ಪೊಲೀಸ್ ಪೇದೆಯೊಬ್ಬರು ಮೃತಪಟ್ಟಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ನಗರದ ಖಡೇ ಬಜಾರ ಠಾಣೆಯ ಪಿ.ಎಸ್.ಐ ಮನೋಹರ ಗಣಾಚಾರಿ ಮೃತಪಟ್ಟ ದುದೈವಿಯಾಗಿದ್ದಾರೆ. ಶನಿವಾರ ಬೆಳಗ್ಗೆ ನಗರ ಸಮೀಪದ ಯಳ್ಳೂರ ರಸ್ತೆಯಲ್ಲಿ ಅಪಘಾತ ಸಂಭವಿಸಿದ್ದು ಎಂದಿನಂತೆ ಬೆಳಗ್ಗಿನ ಅವಧಿಯ ಬಂದೋಬಸ್ತ ಕಾರ್ಯನಿರ್ವಹಿಸಲು ಮನೆಯಿಂದ ಬೈಕ್ ಮೇಲೆ ಬರುವಾಗ ಬೈಕ್ ಸ್ಕಿಡ್ ಆಗಿದೆ. ಬೈಕ್ ಸ್ಕಿಡ್ ಆದ ರಭಸಕ್ಕೆ ನೆಲಕ್ಕೆ ಬಿದ್ದ ಪಿ.ಎಸ್.ಐ.ಗೆ ತಲೆಗೆ ಪೆಟ್ಟು ಬಿದ್ದಿದ್ದರಿಂದ ರಕ್ತ ಸ್ರಾವವಾಗಿ ಸ್ಥಳದಲ್ಲೆ ಮೃತಪಟ್ಟಿದ್ದಾರೆ. ಮೂರು ತಿಂಗಳ ಹಿಂದೆಯಷ್ಟೆ ಪದೊನ್ನತಿ ಪಡೆದಿದ್ದ ಗಣಾಚಾರಿ ಸೆಪ್ಟಂಬರ್ ನಲ್ಲಿ ನಿವೃತ್ತ ಹೊಂದಲಿದ್ದರು.