ಪಿಕಾರ್ಡ್ ಬ್ಯಾಂಕ್ ಕಾಂಗ್ರೆಸ್ ತೆಕ್ಕೆಗೆ

ಪಿಕಾರ್ಡ್ ಬ್ಯಾಂಕ್ ಕಾಂಗ್ರೆಸ್ ತೆಕ್ಕೆಗೆ

ಲಿಂಗಸುಗೂರು : ತಾಲೂಕು ಪ್ರಾಥಮಿಕ ಸಹಕಾರಿ ಗ್ರಾಮೀಣ ಕೃಷಿ ಪತ್ತಿನ ಪಿಕಾರ್ಡ್ ಬ್ಯಾಂಕಿನ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಮಹಾಂತೇಶ ಸೂರನಗೌಡ ಪಾಟೀಲ್ ಮುದಗಲ್ ಅಧ್ಯಕ್ಷರಾಗಿ, ಉಪಾಧ್ಯಕ್ಷರಾಗಿ ಬಸ್ಸಮ್ಮ ಸುಲ್ತಾನಪೂರ 2ಮತಗಳ ಅಂತರದಿಂದ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿ ಶೇಖಹುಸೇನ ಸಹಕಾರ ಇಲಾಖೆ ಘೋಷಿಸಿದರು.

ಪಿಕಾರ್ಡ್ ಬ್ಯಾಂಕ್ ಒಟ್ಟು 14ಜನ ಚುನಾಯಿತ ನಿರ್ದೆಶಕರಿದ್ದು ಒಂದು ಸರ್ಕಾರದ ನಾಮ ನಿರ್ದೆಶನ ಸದಸ್ಯರಾಗಿದ್ದು, ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಪಕ್ಷದ ಮಹಾಂತೇಶ ಸೂರನಗೌಡ ಪಾಟೀಲ್ ಹಾಗೂ ಬಿಜೆಪಿ ಪಕ್ಷದಮಲ್ಲಿಕಾರ್ಜುನ ಶರಣಪ್ಪ ಮೇದ್ಕಿನಾಳ ನಾಮಪತ್ರ ಸಲ್ಲಿಸಿದ್ದರು.

ವಿಜಯೋತ್ಸವ- ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷರಾಗಿ ಮಹಾಂತೇಶ ಸೂರನಗೌಡ ಪಾಟೀಲ್ ಮುದಗಲ ಉಪಾಧ್ಯಕ್ಷರಾಗಿ ಬಸ್ಸಮ್ಮ ಸುಲ್ತಾನಪೂರ ಆಯ್ಕೆಯಾಗುತ್ತಿದಂತೆ. ಕಾಂಗ್ರೆಸ್ ಪಕ್ಷದ ಮುಖಂಡರು ಕಾರ್ಯಕರ್ತರು ಹಿರಿಯರಾದ ಶರಣಪ್ಪ ಮೇಟಿ ಬ್ಲಾಕ್ ಅಧ್ಯಕ್ಷರಾದ ಭೂಪನಗೌಡ ದಾವೂದ ಮುದಗಲ ನೇತೃತ್ವದಲ್ಲಿ ಪಟಾಕಿ ಸಿಡಿಸಿ ಸಿಹಿಹಂಚಿ ವಿಜಯೋತ್ಸವ ಆಚರಿಸಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಪಾಮಯ್ಯ ಮುರಾರಿ, ಜಿ ಗುಂಡಪ್ಪ ನಾಯಕ, ಚನ್ನವೀರಪ್ಪ ಪಾಗದ, ನಾಗರಡ್ಡಿ ಪರುಶೂರಾಮ, ರುದ್ರಗೌಡತುರಡಗಿ ಬಸ್ಸಣ್ಣ ಮೇಟಿ, ಉಮಾದೇವಿ ಗೌಡ ಇತರರು ಇದ್ದರು.

Related