ವ್ಯಕ್ತಿ ನೇಣಿಗೆ ಶರಣು

ವ್ಯಕ್ತಿ ನೇಣಿಗೆ ಶರಣು

ಗದಗ, ಏ.1 : ಮನನೊಂದು ವ್ಯಕ್ತಿಯೊಬ್ಬರು ನೇಣಿಗೆ ಶರಣಾಗಿರುವ ಘಟನೆ ಗದಗ ಜಿಲ್ಲೆಯಲ್ಲಿ ನಡೆದಿದೆ. ಗುರುಸಂಗಪ್ಪ ಜಂಗಣ್ಣವರ (40) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ . ತನಗೆ ಕೊರೊನಾ ಸೋಂಕು ಬರುತ್ತದೆ ಎನ್ನುವ ಭಯದಿಂದ, ಮನನೊಂದು ವ್ಯಕ್ತಿಯೊಬ್ಬ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಗಜೇಂದ್ರಗಡ ತಾಲೂಕಿನ ಕಲ್ಲಿಗನೂರು ಗ್ರಾಮದಲ್ಲಿ ನಡೆದಿದೆ.
ಗುರುಸಂಗಪ್ಪ ಜಂಗಣ್ಣ ತನಗೆ ಕೊರೊನಾ ಸೋಂಕು ಬರುತ್ತದೆ ಎನ್ನುವ ಭಯದಿಂದ ಶಾಂತಗೇರಿ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದ, ವೈದ್ಯರು ಕೊರೊನಾ ವೈರಸ್ ಸೋಂಕು ನಿಮಗೆ ತಗುಲಿಲ್ಲ ಎಂದು ಹೇಳಿದ್ದರು.

ಆದರೆ, ಮಾನಸಿಕ ಖಿನ್ನತೆಯಿಂದ ಕೊರೊನಾ ವೈರಸ್ ಸೋಂಕು ಬರುತ್ತದೆ ಎಂದು ಭಯಗೊಂಡು, ಗ್ರಾಮದ ಹೊರವಲಯದ ಜಮೀನಿನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗಜೇಂದ್ರಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related