ಅಧಿಕಾರಿಯ ನಡೆಗೆ ಪ್ರಶಂಸೆ ವ್ಯಕ್ತಪಡಿಸಿದ ಜನತೆ!

ಅಧಿಕಾರಿಯ ನಡೆಗೆ ಪ್ರಶಂಸೆ ವ್ಯಕ್ತಪಡಿಸಿದ ಜನತೆ!

ಕೆಂಭಾವಿ : ಪಟ್ಟಣದ ಧಕ್ಷ ಪೋಲಿಸ್ ಅಧಿಕಾರಿ ಅನಗತ್ಯವಾಗಿ ಓಡಾಡುವ ಬೈಕ್ ಸವಾರರನ್ನು ಹಿಡಿದು ಕೊರೋನಾ ಬಗ್ಗೆ ಜನರಿಗೆ ಅರಿವು ಮೂಡಿಸಿದರು.

ರಾಜ್ಯಾದ್ಯಂತ 14 ದಿನಗಳ ಕೊರೋನಾ ಕರ್ಪ್ಯೂ ಜಾರಿಯಾಗಿದ್ದು, ಬೆಳಿಗ್ಗೆ10 ಘಂಟೆಯ ನಂತರ ಅನಗತ್ಯ ವಾಗಿ ಓಡಾಡುವ ವಾಹನ ಸವಾರರಿಗೆ ಕಡಿವಾಣ ಹಾಕಲು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಪೋಲಿಸ್ ಅಧಿಕಾರಿ ಪಿಎಸ್‌ಐ ಸುದರ್ಶನ ರೆಡ್ಡಿ ನೇತೃತ್ವದ ತಂಡ ಗಸ್ತಿನಲ್ಲಿ ಸಂಚಲನ ಮಾಡುತ್ತಿದ್ದಾರೆ.

ವೇಳೆ ಸುಖಾಸುಮ್ಮನೆಯಾಗಿ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ವಾಹನ ಸವಾರಿ ಮಾಡುತ್ತಿದ್ದ, ಯುವಕರನ್ನು ಹಿಡಿದು ಮೊದಲಿಗೆ ಕೋವಿಡ್ ಎಂಬ ಮಹಾಮಾರಿ ಕೊರೋನಾ ವೈರಸ್ ಬಗ್ಗೆ ಯುವಕರಿಗೆ ಮನದಟ್ಟನೆ ಯಾಗುವಂತೆ ಅರಿವು ಮೂಡಿಸುವ ಮುಖಾಂತರ ಇಂದು ರಸ್ತೆಗಿಳಿದ ಬೈಕ್ ಸವಾರರಿಗೆ ವೈರಸ್ ಹರಡುವಿಕೆ ಬಗ್ಗೆ ಜಾಗೃತಿ ಮೂಡಿಸುವ ಮುಖಾಂತರ, ಕಾನೂನಿನ ಚೌಕಟ್ಟಿನಲ್ಲಿ ಬೈಕ್ ಸವಾರರಿಗೆ ದಂಡ ಹಾಕಿದ್ದಾರೆ. ಅಧಿಕಾರಿಯ ಈ ನಡೆಗೆ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ವರದಿಗಾರ : ಗಿರೀಶ ಬ್ಯಾಕೋಡ

Related