ಹಾವೇರಿ ಜಿಲ್ಲೆಯ ಇಂದು `ಪಾಪು’ ಅಂತ್ಯಕ್ರಿಯೆ

  • In State
  • March 17, 2020
  • 435 Views
ಹಾವೇರಿ ಜಿಲ್ಲೆಯ ಇಂದು `ಪಾಪು’ ಅಂತ್ಯಕ್ರಿಯೆ

ಹಾವೇರಿ, ಮಾ. 17: ಕರ್ನಾಟಕದ ಮಂದಿ ಎಂದಿಗೂ ಪುಟ್ಟಪ್ಪ ಎನ್ನುವ ಎರಡು ಹೆಸರನ್ನು ಮರೆಯಲಾರರು. ಒಬ್ಬರು ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ, ಇನ್ನೊಬ್ಬರು ಪಾಟೀಲ್​ ಪುಟ್ಟಪ್ಪ. ಹೌದು, ರಾಜ್ಯದ ಇತಿಹಾಸದೊಂದಿಗೆ ಬೆರೆತು ಹೋಗಿರುವ ಬದುಕು ಪಾಟೀಲ್​ ಪುಟ್ಟಪ್ಪನವರದ್ದು. ಸ್ವಾತಂತ್ರ್ಯಕ್ಕೂ ಮೊದಲು ಬ್ರಿಟಿಷರ ವಿರುದ್ಧ ಹೋರಾಡುವ ಮೂಲಕ ತಮ್ಮ ಹೋರಾಟ ಜೀವನವನ್ನು ಆರಂಭಿಸಿದರು. ಸ್ವಾತಂತ್ರ್ಯದ ಬಳಿಕ, ಕರ್ನಾಟಕದ ಏಕೀಕರಣಕ್ಕಾಗಿ ಬೀದಿಗಿಳಿದರು. ಕನ್ನಡಕ್ಕಾಗಿ ಗೋಕಾಕ್​ ಚಳುವಳಿಯಲ್ಲಿ ದುಮುಕಿದರು.

ನೆನ್ನೆ ರಾತ್ರಿ ನಿಧನರಾದ ಹಿರಿಯ ಪತ್ರಕರ್ತ, ಸಾಹಿತಿ ಪಾಟೀಲ ಪುಟ್ಟಪ್ಪ ಅವರ ಅಂತ್ಯಕ್ರಿಯೆ ಇಂದು ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಹಲಗೇರಿಯಲ್ಲಿ ನಡೆಯಲಿದೆ.

ಹುಬ್ಬಳ್ಳಿಯ ವಿಶ್ವೇಶ್ವರ ನಗರದ ಸ್ವಗೃಹದಲ್ಲಿ ಇಂದು ಬೆಳಗ್ಗೆ 9 ರಿಂದ 1 ರವರಗೆ ಪಾರ್ಥಿವ ಶರೀರವನ್ನು ಸಾರ್ವಜನಿಕ ದರ್ಶನಕ್ಕೆ ಇರಿಸಲಾಗುವುದು ಎಂದು ಅವರ ಪುತ್ರ ಅಶೋಕ್ ಪಾಟೀಲ್ ತಿಳಿಸಿದ್ದಾರೆ.

ಪಾಟೀಲ್ ಪುಟ್ಟಪ್ಪ ಅವರ ಅಂತ್ಯ ಸಂಸ್ಕಾರವನ್ನು ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಹಲಗೇರಿಯಲ್ಲಿ ನೆರವೇರಿಸಲಾಗುವುದು ಎಂದು ಹೇಳಿದರು.

 

Related