ಬರೀ ಹಿಂದೂ ಮುಸ್ಲಿಂ ಗಲಾಟೆ ಮಾಡೋದೆ ಬಿಜೆಪಿ ಕೆಲಸ: ಶಾಸಕ ಶ್ರೀನಿವಾಸ್

ಬರೀ ಹಿಂದೂ ಮುಸ್ಲಿಂ ಗಲಾಟೆ ಮಾಡೋದೆ ಬಿಜೆಪಿ ಕೆಲಸ: ಶಾಸಕ ಶ್ರೀನಿವಾಸ್

ತುಮಕೂರು: ಕಳೆದ ಬಾರಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯವರೇ ಪುಲ್ವಾಮ ದಾಳಿ ಮಾಡಿಸಿ ತಮ್ಮ ಅಧಿಕಾರದ ಗದ್ದುಗೆಯನ್ನು ಏರಿದ್ದಾರೆ ಎಂದು ಕಾಂಗ್ರೆಸ್ನ ಶಾಸಕ ಶ್ರೀನಿವಾಸ್ ಅವರು ಬಿಜೆಪಿ ವಿರುದ್ಧ ಗುಡುಗಿದ್ದಾರೆ.

ಇಂದು ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಪುಲ್ವಾಮಾ ದಾಳಿ ಮಾಡಿಸಿದವರು ಬೇರೆ ಯಾರು ಅಲ್ಲ ಬಿಜೆಪಿಗರೇ ಮಾಡಿಸಿದ್ದು ಎಂದು ಸ್ಪೋಟಕ ಮಾಹಿತಿಯನ್ನು ನೀಡಿದ್ದಾರೆ.

ಇನ್ನು ಬಿಜೆಪಿಯವರು ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ರಾಮಮಂದಿರ ಉದ್ಘಾಟನೆ ಮಾಡಿ ರಾಮನ ಹೆಸರಿನಲ್ಲಿ ಮತ ಕೇಳುತ್ತಿದ್ದಾರೆ. ಯಾಕೆ ಬಿಜೆಪಿ ಹೆಸರಿನಲ್ಲಿ ಮತ ಕೇಳಲು ಆಗುವುದಿಲ್ಲವ ಹಾಗಿದ್ದರೆ ಬಿಜೆಪಿ ಲೆಕ್ಕಕ್ಕಿಲ್ಲವಾ ಎಂದು ಪ್ರಶ್ನಿಸಿದ್ದಾರೆ.

ಬರೀ ಹಿಂದೂ ಮುಸ್ಲಿಂ ಗಲಾಟೆ ಮಾಡೋದೆ ಇವರ ಕೆಲಸ. ಮೋದಿ ಬಂದು 10 ವರ್ಷ ಆಯ್ತು, ಒಬ್ಬ ಮುಸ್ಲಿಂ ವ್ಯಕ್ತಿಯನ್ನು ದೇಶದಿಂದ ಓಡಿಸಲು ಆಗಿಲ್ಲ ಎಂದಿದ್ದಾರೆ.

Related