ನಾಡಿನಲ್ಲೊಂದು ಅಪರೂಪದ ಬರ್ತಡೇ

ನಾಡಿನಲ್ಲೊಂದು ಅಪರೂಪದ ಬರ್ತಡೇ

ವಿಜಯಪುರ : ವಿಜಯಪುರ ಜಿಲ್ಲೆಯ ನಿಡಗುಂದಿ ಪಟ್ಟಣದಲ್ಲಿ ಇಲ್ಲಿನ ನಿವಾಸಿ ಸಂಗಯ್ಯ ರುದ್ರಯ್ಯ ಪತ್ರಿ ತಮ್ಮ ಸಾಕು ನಾಯಿಯ ಬರ್ತಡೆ ಆಚರಣೆ ಕಾರ್ಯಕ್ರಮ ನಡೆದಿದೆ.

ಬಸವ ನಾಡಿನಲ್ಲೊಂದು ಅಪರೂಪದ ಜನ್ಮ ದಿನಾಚರಣೆ ಕಾರ್ಯಕ್ರಮ ನಡೆದಿದೆ. ಕುಟುಂಬದ ನಂಬಿಕಸ್ಥನಿಗೆ ಅದ್ಧೂರಿ ಬರ್ತಡೇ ಮಾಡುವ ಮೂಲಕ ಮನೆಯವರು ತಮಗಿರುವ ಪ್ರೀತಿಯನ್ನು ಹೊರಗೆಡವಿದ್ದಾರೆ. ಅಷ್ಟಕ್ಕೂ ಆಗಿದ್ದೇನೆಂದರೆ ಸಾಕು ನಾಯಿಯ ಹುಟ್ಟುಹಬ್ಬ ಆಚರಿಸುವ ಮೂಲಕ ಕುಟುಂಬಸ್ಥರು ಸಂಭ್ರಮಿಸಿದ್ದಾರೆ.

ತಮ್ಮ ಮನೆಯ ಶ್ವಾನಕ್ಕೆ ಟೈಗರ್ ಎಂದು ಹೆಸರಿಟ್ಟಿರುವ ಕುಟುಂಬಸ್ಥರು ತಮ್ಮ ನಾಯಿಯ 3ನೇ ಹುಟ್ಟುಹಬ್ಬ ಆಚರಣೆ ಮಾಡಿದ್ದಾರೆ. ಈ ಬಾರಿ ಶ್ವಾನಕ್ಕೆ 25 ಗ್ರಾಂ ಚಿನ್ನದ ಸರ ಹಾಕಿದ ಕುಟುಂಬಸ್ಥರು ಕೇಕ್ ಕಟ್ ಮಾಡಿ ಬರ್ತಡೆ ಆಚರಣೆ ಮಾಡಿದ್ದಾರೆ. ಹ್ಯಾಪಿ ಹ್ಯಾಪಿ ಬರ್ತಡೆ ಎಂದು ಖಿ ಎಂದು ಅಚ್ಚು ಹಾಕಿಸಿರುವ ಚಿನ್ನದ ಚೈನ್ ಅನ್ನು ನಾಯಿಯ ಕೊರಳಿಗೆ ಹಾಕಿ ಸಂಭ್ರಮಿಸಿದರು.

ಅಷ್ಟೇ ಅಲ್ಲ, 200ಕ್ಕೂ ಹೆಚ್ಚು ಜನರಿಗೆ ಆಹ್ವಾನ ನೀಡಿದ್ದ ಈ ಕುಟುಂಬಸ್ಥರು ನಾಯಿಯ ಬರ್ತಡೇಗೆ ಬಂದಿದ್ದ ಎಲ್ಲರಿಗೂ ಊಟ ಹಾಕಿಸಿ, ಆದರತೆ ಮೆರೆದಿದ್ದಾರೆ.

Related