“ಪ್ರಜಾ ವಾಹಿನಿ” ಜಾಲತಾಣ ವರದಿಗೆ ಸ್ಪಂದಿಸಿದ ಅಧಿಕಾರಿಗಳು

  • In State
  • October 27, 2023
  • 148 Views
“ಪ್ರಜಾ ವಾಹಿನಿ” ಜಾಲತಾಣ ವರದಿಗೆ ಸ್ಪಂದಿಸಿದ ಅಧಿಕಾರಿಗಳು

ಮರಿಯಮ್ಮನಹಳ್ಳಿ: ಹೋಬಳಿಯ ಡಣನಾಯಕನಕೆರೆ ಗ್ರಾಮ ವ್ಯಾಪ್ತಿಯಲ್ಲಿರುವ ಇಂದಿರಾನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಮಕ್ಕಳಿಗೆ ಅಡುಗೆ ಮಾಡಲು ಮತ್ತು ಕುಡಿಯುವ ನೀರಿನ ಅಭಾವ ಕುರಿತು “ಪ್ರಜಾ ವಾಹಿನಿ” ಜಾಲತಾನದಲ್ಲಿ

” ಬಿಸಿ ಊಟ ತಯಾರಿಸಲು ನೀರಿಲ್ಲದೆ ಪರದಾಟ ”

ಎಂಬ ಶೀರ್ಷಿಕೆ ಅಡಿಯಲ್ಲಿ ಅಕ್ಟೋಬರ್ 27ರಂದು ವರದಿ ಪ್ರಕಟಮಾಡಿತ್ತು.

ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿ ಡಣನಾಯಕನ ಕೆರೆ ಗ್ರಾಮ ಪಂಚಾಯತಿಯ ಪಿಡಿಒ ಜಿಲಾನ್ ರವರು ಕೂಡಲೇ ಜಾಗೃತಾರಾಗಿ ಶಾಲೆಗೆ ಆಗಮಿಸಿ ಸ್ಥಳ ಪರಿಶೀಲಿಸಿ ಕೆಟ್ಟು ನಿಂತಿದ್ದ ಕೊಳವೆ ಬಾವಿಯ ಮೊಟರ್ ಪಂಪ್ ನ್ನು ಹೊರ ತೆಗೆದು ಹೊಸ ಮೋಟಾರ್ ಪಂಪ್ ಅಳವಡಿಸಿ ಶಾಲೆಗೆ ಪ್ರತ್ಯೇಕ ಪೈಪ್ ಲೈನ್ ಹಾಕಿ ನೀರಿನ ಅವ್ಯವಸ್ಥೆಯನ್ನು ಸರಿಪಡಿಸಿದ್ದಾರೆ. ಈ ಬಗ್ಗೆ ಮುಖ್ಯ ಗುರುಗಳು ಮತ್ತು ಸ್ಥಳೀಯರು ಸಂತಸ ವ್ಯಕ್ತಪಡಿಸಿ “ಪ್ರಜಾ ವಾಹಿನಿ” ದಿನ ಪತ್ರಿಕೆಯ ಒಡೆತನದ ಜಾಲತಾಣಕ್ಕೆ ಧನ್ಯವಾದ ತಿಳಿಸಿದ್ದಾರೆ.

(ವರದಿ ಮಂಜುನಾಥ ಲಕ್ಕಿಮರ (ವಿಜಯನಗರ ಜಿಲ್ಲೆ)

Related