ನವಜೋಡಿಯ ವಿನೂತನ ಪರಿಸರ ಪ್ರೀತಿ

ನವಜೋಡಿಯ ವಿನೂತನ ಪರಿಸರ ಪ್ರೀತಿ

ಮುದ್ದೇಬಿಹಾಳ : ಮದುವೆ ಸಂದರ್ಭದಲ್ಲಿ ಸಂಬಂಧಿಕರು, ಸ್ನೇಹಿತರು ವಿವಿಧ ಉಡುಗೊರೆಗಳನ್ನು ನವ ದಂಪತಿಗಳಿಗೆ ನೀಡುವುದು ಸಾಮಾನ್ಯ. ಆದರೆ ಇಲ್ಲೊಂದು ಜೋಡಿ ತಮ್ಮ ಮದುವೆಗೆ ಬಂದವರಿಗೆ ಸಸಿ ನೀಡುವ ಮೂಲಕ ವಿಶೇಷ ಪರಿಸರ ಪ್ರೀತಿ ಮೆರೆದಿದೆ.

ತಾಲೂಕಿನ ಸರೂರ ಗ್ರಾಮದ ಮುಖಂಡ ಬಸನಗೌಡ ಪಾಟೀಲ ಅವರ ಸಹೋದರ ಗಿರೀಶಗೌಡ ಪಾಟೀಲ ಅವರ ವಿವಾಹ ಬಾಗಲಕೋಟ ಜಿಲ್ಲೆಯ ಭಗವತಿಯ ಲಕ್ಷ್ಮೀ ಅವರೊಂದಿಗೆ ಸೋಮವಾರ ತಾಲೂಕಿನ ಸರೂರದ ರೇವಣಸಿದ್ದೇಶ್ವರ ದೇವಸ್ಥಾನದಲ್ಲಿ ನಡೆಯಿತು.

ಮದುವೆಗೆ ಬಂದಿದ್ದ ಸಂಬಂಧಿಕರಿಗೆ, ಸ್ನೇಹಿತರಿಗೆ, ಗ್ರಾಮಸ್ಥರಿಗೆ ತಾವು ತರಿಸಿದ್ದ ಅಂದಾಜು 700 ಸಸಿಗಳನ್ನು ಗಿಫ್ಟ್ ಆಗಿ ನೀಡುವ ಮೂಲಕ ವಿಶೇಷ ಪರಿಸರ ಪ್ರೀತಿ ಮೆರೆದರು. ನವದಂಪತಿ ಕೊಟ್ಟ ಸಸಿಗಳಲ್ಲಿ ಮಾವು, ನಿಂಬೆ, ನುಗ್ಗೆ, ಪೇರಲ ಸೇರಿದ್ದವು. ಪರಿಸರ ಪ್ರೀತಿಗೆ ಮೆಚ್ಚಿದ ಸಂಬಂಧಿಕರು, ಸ್ನೇಹಿತರು ಖುಷಿಯಿಂದಲೇ ಸಸಿಗಳನ್ನು ತೆಗೆದುಕೊಂಡು ಹೋದರು.

Related