ರೈತರಿಗೆ ಹೊಸ ಸಾಲ

ರೈತರಿಗೆ ಹೊಸ ಸಾಲ

ಯಡ್ರಾಮಿ:ರೈತರಿಗೆ ಹೊಲ ಅಭಿವೃದ್ಧಿ ಮತ್ತು ಪೈಪ್ ಲೈನ್ ಮಾಡಿಕೊಳ್ಳಲು ನಬಾರ್ಡ್ ಬ್ಯಾಂಕ್ ಸಹಾಯದಿಂದ ಸಾಲ ಸೌಲಭ್ಯ, ಮೋಸವಾದ ರೈತರ ಜಾಗೃತಿ ಮಾಡುವ ಕೆಲಸ ಮಾಡುತ್ತಿದ್ದೇವೆ ಎಂದು ಜೇವರ್ಗಿ ಮಾಜಿ ಶಾಸಕ ದೊಡ್ಡಪ್ಪಗೌಡ, ಪಾಟೀಲ ನರಬೋಳ ಕರಕಿಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆವರಣದಲ್ಲಿ ಭಾನುವಾರ ನಡೆದ ರೈತರಿಗೆ ಬಡ್ಡಿ ರಹಿತ ಸಾಲದ ಚೆಕ್ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕರ್ನಾಟಕ ಭಾರತೀಯ ಜನತಾ ಪಾರ್ಟಿಯ ರೈತ ಮೊರ್ಚ್ ಅಧ್ಯಕ್ಷ ಧರ್ಮಣ್ಣ ದೊಡಮನಿ ಮಾತನಾಡಿ ಬರಿ ಸಾಲ ಪಡೆದರೆ ಸಾಲದು ಮರು ಪಾವತಿ ಮಾಡಿ ಸಹಕಾರಿಸಬೇಕು ಎಂದು ಹೇಳಿದರು. ಈ ಸಂದರ್ಭದಲ್ಲಿ ಡಿ ಸಿ ಸಿ ಬ್ಯಾಂಕ್ ನಿರ್ದೇಶಕ ನಿಂಗಣ್ಣ.ದೊಡಮನಿ, ಶೋಭಾ ಭಾಣಿ, ವಿಜಯಲಕ್ಷ್ಮಿ, ರೇವಣಸಿದ್ದ, ಸಂಕಾಲಿ, ಬಸನಗೌಡ ಪಾಟೀಲ, ಚಂದ್ರಕಾಂತ ಸಾಹು, ನಾನಗೌಡ, ಮೈಬುಬ ಪಾಟೇಲ್, ಶ್ರೀಶೈಲಗೌಡ ಕರಕಿಹಳ್ಳಿ, ಬಸನಗೌಡ ವರವಿ, ಶಂಕರಲಿಂಗ ಕರಕಿಹಳ್ಳಿ, ಅಲ್ಲಾ ಪಟೇಲ್, ಕಾಶಿನಾಥಗೌಡ ವರವಿ, ಶಾಮು ಸಾಹುಕಾರ, ಇನ್ನಿತರರಿದ್ದರು.

Related