ಆಸ್ತಿ ಜಗಳಕ್ಕೆ ಹೆಂಡತಿಯ ಕೊಲೆ

ಆಸ್ತಿ ಜಗಳಕ್ಕೆ ಹೆಂಡತಿಯ ಕೊಲೆ

ಯಾದಗಿರಿ : ಯಾದಗಿರಿ ಜಿಲ್ಲೆಯ ಗುರುಮಿಠಕಲ್ ತಾಲೂಕಿನ ಗಾಜಕೂಟ ಗ್ರಾಮದಲ್ಲಿ ಗಂಡ ಹೆಂಡತಿಯನ್ನು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ನಡೆದಿದೆ.

ಭೀಮಣ್ಣನಿಗೆ ಎರಡು ಮದುವೆಯಾಗಿದ್ದು ಭೀಮಣ್ಣನ ಮೊದಲ ಹೆಂಡತಿಗೆ ನಾಲ್ಕು ಜನ ಮಕ್ಕಳಿದ್ದು ಮೊದಲ ಹೆಂಡತಿ ಮೃತಪಟ್ಟ ಹಿನ್ನಲೆಯಲ್ಲಿ ಭೀಮಣ್ಣ ನರಸಮ್ಮಳನ್ನ ಎರಡನೆ ಮದುವೆಯಾಗಿದ್ದ, ಆದರೆ ಮಕ್ಕಳಿಗೆ ಆಸ್ತಿ ನೀಡುವ ವಿಚಾರವಾಗಿ ಭೀಮಣ್ಣ ಮತ್ತು ನರಸಮ್ಮನ ನಡುವೆ ಆಗಾಗ ಜಗಳವಾಗುತ್ತಿತ್ತು ನಿನ್ನೆ ತಡ ರಾತ್ರಿ ಜಗಳ ವಿಕೋಪಕ್ಕೆ ತಿರುಗಿ ಬೀಮಣ್ಣ ತನ್ನ ಹೆಂಡತಿಯನ್ನು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿ ಗಾಬರಿಯಿಂದ ಭೀಮಣ್ಣ ಓಡುತ್ತಿರುವಾಗ ಆತನನ್ನು ಹಿಡಿದ ಗ್ರಾಮಸ್ಥರು, ವಿಚಾರಿಸಿದಾಗ ಸತ್ಯ ಬಾಯಿಟ್ಟಿದ್ದಾನೆ. ಇದರಿಂದಾಗಿ ಕೋಪಗೊಂಡ ಗ್ರಾಮಸ್ಥರು, ಭೀಮಣ್ಣನ್ನನ್ನು ರಾತ್ರಿಯಿಡಿ ಮರಕ್ಕೆ ಕಟ್ಟು ಹಾಕಿದ್ದಾರೆ.

ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಭೀಮಣ್ಣನ್ನು ಬಂದಿಸಿ ಗುರುಮಿಠಕಲ್ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣವನ್ನು ದಾಖಲಿಸಿದ್ದಾರೆ.

Related