ಗಜೇಂದ್ರಗಡ : ರೋಣ ಹಾಗೂ ಗಜೇಂದ್ರಗಡ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಕನ್ನಡ ರಾಜ್ಯೋತ್ಸವ ಆಚರಣೆ ಹಾಗೂ ಸಾಹಿತಿ ಎಮ್.ಎಸ್ ಮಕನಾದಾರ ಹಾಗೂ ಐ.ಎ ರೇವಡಿ ಸಂಪಾದಿತ ರೋಣ ಹಾಗೂ ಗಜೇಂದ್ರಗಡ ತಾಲೂಕಾ ಪ್ರಾತಿನಿಧಿಕ ಕವನ ಸಂಕಲನವಾದ ಬೆಟ್ಟದ ಬೇರು ಕವನ ಸಂಕಲನ ಲೋಕಾರ್ಪಣೆ ಕಾರ್ಯಕ್ರಮ ನಗರದ ಮೈಸೂರು ಮಠದಲ್ಲಿ ನಡೆಯಿತು.
ಕಾರ್ಯಕ್ರಮ ನಾಡಗೀತೆ ಹಾಗೂ ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪುಪ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮ ಪ್ರಾರಂಭ ಮಾಡಲಾಯಿತು. ಬಳಿಕ ಬೆಟ್ಟದ ಬೇರು ಕೃತಿಯನ್ನು ರವೀಂದ್ರ ದೊಡ್ಡಮೇಟಿ ಸೇರಿದಂತೆ ವೇದಿಕೆಯ ಮೇಲಿನ ಅಥಿತಿಗಳು ಕೃತಿಯನ್ನು ಲೋಕಾರ್ಪಣೆ ಮಾಡಲಾಯಿತು.