ಮಸೀದಿಗೆ ನುಗ್ಗಿ ಗಲಾಟೆ: 22 ಜನರ ಬಂಧನ

ಮಸೀದಿಗೆ ನುಗ್ಗಿ ಗಲಾಟೆ: 22 ಜನರ ಬಂಧನ

ಬೆಳಗಾವಿ, ಏ. 06:  ಭಾರತ ದೇಶದಲ್ಲಿ ನಾವೆಲ್ಲೂ ಒಂದೇ, ನಾವೆಲ್ಲೂ ಭಾರತೀಯರು ಎಂದು ನಾವೆಲ್ಲಾ ಹೇಳುತ್ತೇವೆ.

ಹೌದು, ನೆನ್ನೆ  ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನತೆಗೆ ಮನೆಯಲ್ಲಿ ಲೈಟ್ ಆಫ್ ಮಾಡಿ ದೀಪ ಹಚ್ಚುವಂತೆ ಕರೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಮಸೀದಿಯಲ್ಲಿ ಲೈಟ್ ಆಫ್ ಮಾಡದಿರುವುದಕ್ಕೆ ಕೆಲ ಹಿಂದು ಜನರು ಮಸೀದಿಗೆ ನುಗ್ಗಿ ಗಲಾಟೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹೊಸೂರು ಗ್ರಾಮದಲ್ಲಿ ನಡೆದಿದೆ.

ಹೊಸೂರು ಗ್ರಾಮದಲ್ಲಿ ನಿನ್ನೆ ರಾತ್ರಿ 9 ಗಂಟೆಗೆ ಮಸೀದಿಯಲ್ಲಿ ಲೈಟ್ ಆಫ್ ಮಾಡದ ಹಿನ್ನೆಲೆಯಲ್ಲಿ ಕೆಲ ದುಷ್ಕರ್ಮಿಗಳು ಮಸೀದಿಗೆ ನುಗ್ಗಿ ಗಲಾಟೆ ನಡೆಸಿದ್ದು, ಪೊಲೀಸರು 9 ಮಂದಿಯನ್ನು ಬಂಧಿಸಿದ್ದಾರೆ.

ಇನ್ನು ನಿಪ್ಪಾಣಿ ತಾಲೂಕಿನ ಮಸೀದಿಯಲ್ಲೂ ಗಲಾಟೆ ನಡೆಸಿದ್ದ 13 ಮಂದಿಯನ್ನು ಪೊಲೀಸರು ಬಂಧಿಸಿದ್ದು, ಯಮನಕರಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Related