ಬೇಲೂರು ದೇಗುಲಕ್ಕೆ ಸಚಿವ ಸಿ.ಟಿ.ರವಿ ಭೇಟಿ

ಬೇಲೂರು ದೇಗುಲಕ್ಕೆ ಸಚಿವ ಸಿ.ಟಿ.ರವಿ ಭೇಟಿ

ಬೇಲೂರು, ಏ. 06: ಇಲ್ಲನ ಶ್ರೀಚನ್ನಕೇಶವಸ್ವಾಮಿ ದೇಗುಲಕ್ಕೆ ಪ್ರವಾಸೋಧ್ಯಮ ಸಚಿವ ಸಿ.ಟಿ.ರವಿ ಅವರು ಭೇಟಿ ನೀಡಿ ದರ್ಶನ ಪಡೆದರು.

ರಥೋತ್ಸವ ದಿನದಂದು ದೇವರಿಗೆ ಸಹಜವಾಗೆ ಧಾರ್ಮಿಕವಾಗಿ ವಿಶೇಷ ಪೂಜೆ ನಡೆಸಲಾಯಿತು. ಕೊರೊನಾ ಮಾರಕ ರೋಗದ ಹಿನ್ನಲೆಯಲ್ಲಿ ರಥೋತ್ಸವ ರದ್ಧುಪಡಿಸಲಾಗಿದ್ದು, ರಥೋತ್ಸವ ದಿನವಾದ ಇಂದು ಎಂದಿನಂತೆ ಪೂಜೆ ನಡೆಸಲಾಯಿತು. ತಹಸೀಲ್ದಾರ್ ನಟೇಶ್, ತಾ.ಪಂ.ಇಒ ರವಿಕುಮಾರ್, ಅರ್ಚಕ ಸಮೂಹ ಇದ್ದರು.

ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಅವರು, ಕೊರೊನಾ ರೋಗದ ಹಿನ್ನಲೆಯಲ್ಲಿ ದೇಶಾದ್ಯಂತ ಲಾಕ್‌ಡೌನ್ ಏರ್ಪಡಿಸಲಾಗಿದ್ದು, ಆ ಕಾರಣ ರಥೋತ್ಸವ ರದ್ದಾಗಿದೆ. ಮುಂದಿನ ದಿನದಲ್ಲಿ ದೇವರ ದಯೆಯಿಂದ ವಿಜೃಂಭಣೆಯಿಂದ ರಥೋತ್ಸವ ನಡೆಸೋಣ. ಮನುಕುಲಕ್ಕೆ ಒಳ್ಳಯದಾಗಲಿ ಎಂದು ದೇವರಲ್ಲಿ ಪ್ರಾರ್ಥಿಸಿದ್ದೇನೆಂದರು.

ಪತ್ರಿಕೆಗೆ ಮಾಹಿತಿ ನೀಡಿದ ಆಗಮಿಕ ಅರ್ಚಕ ಕೃಷ್ಣಸ್ವಾಮಿಭಟ್ಟರ್, ರಥೋತ್ಸವ ನಡೆಯುವ ಇಂದು ಲೋಕಕಲ್ಯಾಣಾರ್ಥವಾಗಿ ದೇವರಿಗೆ ರಥೋತ್ಸವ ನಡೆಸುವ ಸಮಯದಲ್ಲಿ ವಿಶೇಷ ಪೂಜೆ ನೆರವೇರಿಸಲಾಗಿದೆ. ದೇಶಕ್ಕೆ ಒಳಿತನ್ನು ಮಾಡಲಿ, ರೋಗಬಾದೆ ದೂರ ಮಾಡಲಿ ಎಂದು ಪ್ರಾರ್ಥಿಸಿದ್ದೇವೆ ಎಂದು ತಿಳಿಸಿದರು. ಪೂಜಾಕಾರ್ಯದಲ್ಲಿ ಶ್ರೀನಿವಾಸಭಟ್ಟರ್ ಇದ್ದರು.

 

Related