ಕೊರೋನ ನಿಯಂತ್ರಣಕ್ಕೆ ಅಧಿಕಾರಿಗಳೊಂದಿಗೆ ಸಭೆ

ಕೊರೋನ ನಿಯಂತ್ರಣಕ್ಕೆ ಅಧಿಕಾರಿಗಳೊಂದಿಗೆ ಸಭೆ

ಮಹದೇವಪುರ, ಏ. 01: ದೆಹಲಿಯಲ್ಲಿ ನಡೆದ ನಿಜಾಮುದ್ದೀನ್ ಸಭೆಯಿಂದಲೆ ಕೊರೋನ ವೈರಸ್ ದೇಶಾದ್ಯಂತ ಹರಡಲು ಕಾರಣ ಎನ್ನಲಾಗಿದ್ದು, ಈ ಸಭೆಯಲ್ಲಿ ಭಾಗವಹಿಸಿ ವೈಟ್  ಫೀಲ್ಡ್ ರೈಲ್ವೆ ನಿಲ್ದಾಣಕ್ಕೆ 20 ರಿಂದ 25 ಮಂದಿ ಆಗಮಿಸಿರುವ ಶಂಕೆ ಇದ್ದು ಅವರ ಹುಡುಕಾಟದಲ್ಲಿ ತೊಡಗಿದ್ದು ಎಲ್ಲರನ್ನು ಹೋಂ ಕ್ವಾರಂಟೈನ್ ನಲ್ಲಿ ಇಡಲಾಗುವುದು ಎಂದು ನಗರಾಭಿವೃದ್ಧಿ ಸಚಿವ ಬಿ.ಎ.  ಬಸವರಾಜ ತಿಳಿಸಿದ್ದಾರೆ.

ಇಂದು ಮಹದೇವಪುರ ಬಿಬಿಎಂಪಿ ಕಚೇರಿಯಲ್ಲಿ ಮಹದೇವಪುರ ವಲಯದ ಪಾಲಿಕೆ ಸದಸ್ಯರು, ಬಿಬಿಎಂಪಿ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಕೊರೋನ ವೈರಸ್ ಹರಡದಂತೆ ತಡೆಯುವಲ್ಲಿ ಎಲ್ಲರು ಒಟ್ಟಾಗಿ ಶ್ರಮಿಸಬೇಕು. ಈಗಾಗಲೆ ಎಲ್ಲಾ ವಾರ್ಡ್ ಗಳಲ್ಲಿ ನಿರಾಶ್ರಿತರು, ಕೂಲಿಕಾರ್ಮಿಕರು ಹಾಗೂ ಬಡವರಿಗೆ ಅಗತ್ಯ ವಸ್ತುಗಳನ್ನು ಪೂರೈಕೆ ಮಾಡುತ್ತಿದ್ದು, ಇನ್ನು ಯಾರಾದರು ದಾನಿಗಳು ಸಾಮಗ್ರಿಗಳನ್ನು ನೀಡಲು ಮುಂದೆ ಬಂದಲ್ಲಿ ಅವರನ್ನು ಒಟ್ಟುಗೂಡಿಸಿಕೊಂಡು, ಎಲ್ಲೆಡೆ ಔಷದಿ ಸಿಂಪಡಣೆ ಮಾಡುವುದರೊಂದಿಗೆ ಎಲ್ಲರಿಗು ಮಾಸ್ಕ್ ವಿತರಣೆ ಮಾಡಿ ವೈರಸ್ ಹರಡದಂತೆ ತಡೆಯಬೇಕು ಎಂದು ತಿಳಿಸಿದರು.

 

 

Related