ರೋಗಿಗೆ ಮಾತ್ರೆ ಔಷಧಿ ತಂದುಕೊಟ್ಟ ಶಾಸಕ ಮಸಾಲೆ ಜಯರಾಮ್

ರೋಗಿಗೆ ಮಾತ್ರೆ ಔಷಧಿ ತಂದುಕೊಟ್ಟ ಶಾಸಕ ಮಸಾಲೆ ಜಯರಾಮ್

ತುರುವೇಕೆರೆ: ತಾಲೂಕಿನ ಸಿ ಎಸ್ ಪುರ ಗ್ರಾಮದ ನಾರಾಯಣ್ ಎಂಬುವವರು ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿದ್ದಾರೆ.

ಪ್ರಸ್ತುತ ಕರೋನ ವೈರಸ್ ರೋಗದ ಪ್ರಯುಕ್ತ ಲಾಕ್ ಡೋನ್ ಇರುವುದರಿಂದ ಔಷಧಿ ಹಾಗೂ ಮಾತ್ರೆಗಳು ಕಾಲಿಯಾಗಿದ್ದು ಬೆಂಗಳೂರಿನ ಜಯದೇವ ಆಸ್ಪತ್ರೆಗೆ ಹೋಗಿ ತರಬೇಕಾದ ಅನಿವಾರ್ಯತೆ ಇದ್ದು ಹೋಗುವುದಕ್ಕೂ ಸಹ ಆಗದಿದ್ದಾಗ ಈ ವಿಚಾರವನ್ನು ಮಾನ್ಯ ಶಾಸಕ ಮಸಾಲೆ ಜಯರಾಮ್ ಅವರಿಗೆ ತಿಳಿಸಿದರು.

ಈ ವಿಷಯ ತಿಳಿದ ಕೂಡಲೇ ಬೆಂಗಳೂರಿನಿಂದ ತಮ್ಮ ಸ್ವಂತ ಹಣದಲ್ಲಿ ಮಾತ್ರೆ ಔಷಧಿಗಳನ್ನು ಒಂದು ತಿಂಗಳಿಗೆ ಆಗುವಷ್ಟು ಔಷಧಗಳನ್ನು ತಂದು ಕೊಟ್ಟಿದ್ದಾರೆ.

ಈ ವಿಚಾರವಾಗಿ ಮಾತನಾಡಿದ ಶಾಸಕರು ತುರುವೇಕೆರೆ ತಾಲೂಕಿನ ಆದ್ಯಂತ ಕ್ಯಾನ್ಸರ್ ಹಾಗೂ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವವರು ಮಾತ್ರೆ ಔಷಧಿ ಬೇಕಾದ ಸಂದರ್ಭದಲ್ಲಿ ನಮಗೆ ತಿಳಿಸಿ ನಾವು ತಂದು ಕೊಡುವುದಾಗಿ ತಿಳಿಸಿದರು.

Related