ಮಂಗಳಮುಖಿಯರಿಗೆ ಮಿಡಿದ ಮನ

ಮಂಗಳಮುಖಿಯರಿಗೆ ಮಿಡಿದ ಮನ

ಕೊಪ್ಪಳ : ಜಿಲ್ಲೆಯಲ್ಲಿ ದಿನೇ ದಿನೇ ಕೊರೋನಾ ಸೋಂಕಿನ ಅಟ್ಟಹಾಸ ಹೆಚ್ಚಾಗುತ್ತಲೇ ಇದೆ. ಕೊರೋನಾ ನಿಗ್ರಹ ಮಾಡುವ ಉದ್ದೇಶದಿಂದ 14 ದಿನಗಳ ಕಾಲ ಲಾಕ್‌ಡೌನ್ ಜಾರಿ ಮಾಡಲಾಗಿದೆ.

ಲಾಕ್‌ಡೌನ್ ಸಂದರ್ಭದಲ್ಲಿ ಬಡವರಿಗೆ, ಹಲವು ಬಾರಿ ಸಹಾಯ ಹಸ್ತ ಚಾಚುವ ಕೈ ಯುವ ನಾಯಕ ಗಿರೀಶ್ ಜಿ, ಹಿರೇಮಠ ಶಹಪುರ ಇವರು ಕೊಪ್ಪಳ ಜಿಲ್ಲೆಯ ಯುವ ಉದ್ಯಮಿದಾರರು. ಲಾಕಡೌನ್ ಸಮಸ್ಯೆಯಿಂದ ತೊಂದರೆ ಅನುಭವಿಸುತ್ತಿರುವ ಬಸ್ ಟ್ರೇನ್ ಇಲ್ಲದೆ ನಮಗೆ ಊಟಕ್ಕೆ ತೊಂದರೇ ಆಗಿದೆ ಎಂದು ಮಂಗಳಮುಖಿಯರು ತಿಳಿಸಿದ್ದು ಗೊತ್ತಾದ ತಕ್ಷಣ ಸಹಾಯ ಹಸ್ತ ಚಾಚಿದ ಗಿರೀಶ ಅವರು ಮಂಗಳಮುಖಿಯರ ಕಷ್ಟಕ್ಕೆ ಸ್ಪಂದಿಸಿ ನನ್ನ ಒಂದು ಅಳಿಲು ಸೇವೆ ಎಂದು ಅಕ್ಕಿ, ಜೋಳ, ಬೆಲ್ಲ, ಟೀ ಪುಡಿ, ಪೇಸ್ಟ್ ಬ್ರೇಸ್, ಸಾಬೂನ್ ಹಾಗೂ ಸೀರೆ ಕಣವಿರುವ ಕಿಟ್‌ನ್ನು ಕೊಪ್ಪಳದ ಶಾರದಾ ಟಾಕೀಸ್ ಹತ್ತಿರ ವಿತರಿಸಿ ಮಾನವೀಯತೆ ಮೆರೆದರು.

Related