ಗಣೇಶ ದೇವಸ್ಥಾನಕ್ಕೆ ಭೇಟಿ ನೀಡಿ ನಾಮಪತ್ರ ಸಲ್ಲಿಸಿದ ಮನ್ಸೂರ್ ಅಲಿಖಾನ್

ಗಣೇಶ ದೇವಸ್ಥಾನಕ್ಕೆ ಭೇಟಿ ನೀಡಿ ನಾಮಪತ್ರ ಸಲ್ಲಿಸಿದ ಮನ್ಸೂರ್ ಅಲಿಖಾನ್

ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಲೋಕಸಭಾ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು‌, ಕೇಂದ್ರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮನ್ಸೂರ್ ಅಲಿಖಾನ್ ಅಲಿಖಾನ್ ಇಂದು ನಾಮಪತ್ರ ಸಲ್ಲಿಸಿದ್ದಾರೆ.

ನಾಮಪತ್ರ ಸಲ್ಲಿಸೋಕು ಮುನ್ನ ರಂಜಾನ್ ತಿಂಗಳ ಆದರು ಕೂಡ ಹಿಂದೂ ದೇವಾಲಯ ಗಣೇಶ ದೇವಸ್ಥಾನಕ್ಕೆ ಭೇಟಿ ನೀಡಿ ಗಣೇಶನ ಆಶೀರ್ವಾದವನ್ನು ಪಡೆದು ನಂತರ ಸಾವಿರಾರು ಮುಖಂಡರ ಜೊತೆ ಅದ್ದೂರಿಯಾಗಿ ಬಿಬಿಎಂಪಿ ಕಚೇರಿಗೆ ಭೇಟಿ ನೀಡಿ ತಮ್ಮ ನಾಮಪತ್ರವನ್ನು ಸಲ್ಲಿಸಿದ್ದಾರೆ.

ಮುಸ್ಲಿಂ ಮತ್ತು ಕ್ರೈಸ್ತ ಮತಗಳ ಜೊತೆಗೆ ಹಿಂದೂಗಳ ಮತ ಗಳಿಸಿಕೊಂಡ್ರೆ ಬೆಂಗಳೂರು ಕೇಂದ್ರ ಗೆಲ್ಲೋದು ಸುಲಭ ಎಂಬ ಲೆಕ್ಕಾಚಾರದಲ್ಲಿರುವ ಮನ್ಸೂರ್ ಅಲಿ ಖಾನ್ ಜಾತ್ಯಾತೀತ ನೆಲೆಗಟ್ಟಿನಲ್ಲಿ ಸರ್ವ ಧರ್ಮ ಸಮನ್ವಯ ಎಂಬ ತತ್ವದಲ್ಲಿ ಇಂದು ನಾಮಪತ್ರ ಸಲ್ಲಿಕೆಗೂ ಮುನ್ನ ಸಂಪಂಗಿರಾಮ ನಗರದ ಗಣೇಣ ದೇವಸ್ಥಾನಕ್ಕೆ ಭೇಟಿ ಕೊಟ್ಟು ಒಂದು ಸಂದೇಶ ರವಾನೆ ಮಾಡೋ ಪ್ರಯತ್ನ ಮಾಡಿದ್ದಾರೆ.

Related