ಕೊರೋನಾ: 6 ಮಂದಿ ಬಲಿ

ಕೊರೋನಾ: 6 ಮಂದಿ ಬಲಿ

ಮಂಡ್ಯ: ಮಂಡ್ಯದಲ್ಲಿ ಎರಡು-ಮೂರು ದಿನಗಳಿಂದ ಕೊರೋನಾದಿಂದ ಯಾವುದೇ ಸಾವು ಸಂಭವಿಸಿಲ್ಲ. ಆದರೆ ಇದೀಗ 6 ಮಂದಿ ಮೃತಪಟ್ಟಿದ್ದು ನೋವಿನ ಸಂಗತಿಯಾಗಿದೆ ಎಂದು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಡಾ. ನಾರಾಯಣ ಗೌಡ ಹೇಳಿದರು.

ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕೋವಿಡ್ 19 ನಿಂದ ಮೃತಪಟ್ಟವರಿಗೆ ಹೈಪೋಥೈರಾಯ್ಡ್, ಬಿಪಿ, ಶುಗರ್, ಶ್ವಾಸಕೋಶದ ಸಮಸ್ಯೆ ಕೂಡ ಇತ್ತು. ವೆಂಟಿಲೇಟರ್‍ನಲ್ಲಿರುವ ಇಬ್ಬರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಕೊರೋನಾದಿಂದ ಮೃತಪಟ್ಟವರ ಅಂತ್ಯ ಸಂಸ್ಕಾರಕ್ಕೆ 35 ಕಡೆಗಳಲ್ಲಿ ಸ್ಥಳ ಗುರುತಿಸಲಾಗುತ್ತಿದೆ ಎಂದರು.

Related