ಚಡ್ಡಿ ನಮ್ಮ ರೈತರ ಸಂಕೇತವಾಗಿದೆ ಹೊಲ, ಗದ್ದೆಗಳಲ್ಲಿ ರೈತರು ಕೆಲಸ ಮಾಡುವ ಸಮಯದಲ್ಲಿ ಚಡ್ಡಿ ಹಾಕಿಕೊಂಡು ಕೆಲಸ ಮಾಡುತ್ತಾರೆ ನಿಮ್ಮ ಚಡ್ಡಿ ಜಗಳದಲ್ಲಿ ರೈತರಿಗೆ ಯಾಕೆ ಅಪಮಾನ ಮಾಡುತ್ತಿದ್ದೀರಿ ಎಂದು ಕಿಡಿಕಾರಿದ್ದಾರೆ.
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ಧಾಣದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪ ಹಾಗು ಸಿದ್ದರಾಮಯ್ಯ ಬೇಟಿ ಕುರಿತು ಪ್ರತಿಕ್ರಿಯಿಸಿದ ಹೆಚ್.ಡಿ.ಕೆ ಯಾವ ಕಾರಣಕ್ಕೆ ಇಬ್ಬರು ಬೇಟಿ ಮಾಡಿದ್ದಾರೋ ಗೊತ್ತಿಲ್ಲ. ಆದರೆ, ವಿಐಪಿ ಕೊಠಡಿಯಲ್ಲಿ ಯಾರಿಗೂ ಸಹ ಪ್ರವೇಶವನ್ನ ನೀಡುವುದಿಲ್ಲ ಇವರುಗಳು ಅವರ ಹಿಂಬಾಲಕರನ್ನು ಕರೆಸಿಕೊಂಡು ಫೋಟೋ ಹಾಗು ವಿಡಿಯೋ ಮಾಡಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ ಎಂದು ಕಾಲೆಳೆದಿದ್ದಾರೆ.
ಇದೇ ವೇಳೆ 2020ರಲ್ಲಿ ನಡೆದ ರಾಜ್ಯಸಭೆ ಚುನಾವಣೆಯಲ್ಲಿ ದೇವೇಗೌಡರ ರಾಜ್ಯಸಭೆ ಪ್ರವೇಶಕ್ಕೆ ಕಾಂಗ್ರೆಸ್ ಯಾವುದೇ ಪಾತ್ರವನ್ನ ವಹಿಸಿಲ್ಲ. ಸಿದ್ದರಾಮಯ್ಯನವರು ಮಾತಿಗೆ ಮುಂಚೆ ತಾವು ಹಾಗು ತಮ್ಮ ಪಕ್ಷ ಅಲ್ಪಸಂಖ್ಯಾತರ ಪರ ಇರುವುದಾಗಿ ಹೇಳಿಕೊಳ್ಳುತ್ತದೆ ಆದರೆ, ಮನ್ಸೂರ್ ಅಲಿ ಖಾನ್ರನ್ನು ಎರಡನೇ ಅಭ್ಯರ್ಥಿಯನ್ನಾಗಿ ಯಾಕೆ ಮಾಡಿದ್ದೀರಿ ಎಂದು ಪ್ರಶ್ನಿಸಿದ್ದಾರೆ.